Advertisement

ರಾಮಮಂದಿರ ಶಿಲಾನ್ಯಾಸ ಸಂಭ್ರಮ : ಪಟ್ಟಾಭಿರಾಮನಾಗಿ ಕಂಗೊಳಿಸಿದ ಉಡುಪಿ ಶ್ರೀಕೃಷ್ಣ

05:24 PM Aug 05, 2020 | sudhir |

ಉಡುಪಿ : ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣಕ್ಕೆ ಭೂಮಿಪೂಜೆ ನಡೆಯುವ ಶುಭದಿನದಂದು ಉಡುಪಿಯ ಶ್ರೀಕೃಷ್ಣ ಮಠದಲ್ಲಿ ಕಾಣಿಯೂರು ಮಠಾಧೀಶರಾದ ಶ್ರೀವಿದ್ಯಾವಲ್ಲಭತೀರ್ಥ ಶ್ರೀಪಾದರು ಶ್ರೀ ಕೃಷ್ಣ ದೇವರಿಗೆ ವಿಶೇಷವಾಗಿ “ಪಟ್ಟಾಭಿರಾಮ” ದೇವರ ಅಲಂಕಾರ ಮಾಡಿದರು. ಪರ್ಯಾಯ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಮಹಾಪೂಜೆಯನ್ನು ನೆರವೇರಿಸಿದರು .

Advertisement

ಅಯೋಧ್ಯೆಯಲ್ಲಿ ಭೂಮಿಪೂಜೆಯ ವಿಧಿ ವಿಧಾನಗಳು ನೆರವೇರುತ್ತಿದ್ದಂತೆ ಉಡುಪಿಯ ಕೃಷ್ಣ ಮಠದಲ್ಲೂ ದೇವರನ್ನು ಅಲಂಕಾರಗೊಳಿಸಿ ವಿಶೇಷವಾಗಿ ಪೂಜೆಗಳು ನೆರವೇರಿತು.

ಪಟ್ಟಾಭಿರಾಮನಂತೆ ಕಂಗೊಳಿಸಿದ ಅಲಂಕಾರ ಪ್ರೀಯನಾಗಿರುವ ಶ್ರೀಕೃಷನಿಗೆ ರಾಮನ ಪಟ್ಟಾಭಿಷೇಕ ನೆನಪಿಸುವ ರೀತಿಯಲ್ಲಿ ಪಟ್ಟಾಭಿರಾಮನ ಅಲಂಕಾರವನ್ನು ಕಾಣಿಯೂರು ಮಠಾಧೀಶರಾದ ಶ್ರೀವಿದ್ಯಾವಲ್ಲಭತೀರ್ಥ ಶ್ರೀಪಾದರು ನಡೆಸಿದರೆ ಪರ್ಯಾಯ ಶ್ರೀ ಈಶಪ್ರೀಯತೀರ್ಥ ಶ್ರೀಪಾದರು ಮಹಾಪೂಜೆಯನ್ನು ನೆರವೇರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next