Advertisement

ಕೋವಿಡ್-19 ಸೋಂಕು ಗೆದ್ದು ಮಠಕ್ಕೆ ಮರಳಿದ ಪುತ್ತಿಗೆ ಸುಗುಣೇಂದ್ರ ಶ್ರೀ

05:10 PM Aug 01, 2020 | keerthan |

ಉಡುಪಿ: ಕೋವಿಡ್-19 ಸೋಂಕು ತಾಗಿರುವುದು ದೃಢವಾದ ಕಾರಣ ಆಸ್ಪತ್ರೆಗೆ ದಾಖಲಾಗಿದ್ದ ಪುತ್ತಿಗೆ ಮಠದ ಸುಗುಣೇಂದ್ರ ಶ್ರೀಗಳು ಗುಣಮುಖರಾಗಿದ್ದು, ಮಠಕ್ಕೆ ಮರಳಿದ್ದಾರೆ.

Advertisement

ಕಳೆದ ಜುಲೈ 21ರಂದು ಪುತ್ತಿಗೆ ಶ್ರೀಗಳಿಗೆ ಕೋವಿಡ್ -19 ಸೋಂಕು ದೃಢವಾಗಿತ್ತು.

ಬೆಂಗಳೂರಿನಿಂದ ಬಂದ ನಂತರ ಶ್ರೀಗಳಿಗೆ ಕೋವಿಡ್ ಸಂಬಂಧಿ ಲಕ್ಷಣಗಳು ಕಂಡುಬಂದಿದ್ದವು. ಈ ಕಾರಣದಿಂದ ಸ್ವಾಬ್ ಟೆಸ್ಟ್ ಮಾಡಿದಾಗ ಕೋವಿಡ್ 19 ಸೋಂಕು ತಾಗಿರುವು ದೃಢವಾಗಿತ್ತು. ನಂತರ ಶ್ರೀಗಳು ಮಣಿಪಾಲ ಆಸ್ಪತ್ರೆಗೆ ದಾಖಲಾಗಿದ್ದರು.

ಸದ್ಯ ಶ್ರೀಗಳು ಕೋವಿಡ್ ಸೋಂಕಿನಿಂದ ಸಂಪೂರ್ಣ ಗುಣಮುಖರಾಗಿದ್ದು, ಮಠಕ್ಕೆ ಮರಳಿದ್ದಾರೆ. ಮಠದಲ್ಲಿ ದೈನಂದಿನ ಪೂಜಾ ವಿಧಿ ವಿಧಾನದಲ್ಲಿ ತೊಡಗಿಸಿಕೊಂಡಿದ್ದಾರೆ. ವೈದ್ಯರು ಇನ್ನೂ ಕೆಲವು ದಿನಗಳ ಕಾಲ ವಿಶ್ರಾಂತಿ ಪಡೆಯುವಂತೆ ಸಲಹೆ ನೀಡಿದ್ದಾರೆ ಎಂದು ಮಠದ ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next