Advertisement

Udupi; ಎಪಿಎಂಸಿ ನಿವೇಶನ ಮಾರಾಟ ವಿರೋಧಿಸಿ ವರ್ತಕರಿಂದ ಪ್ರತಿಭಟನೆ, ಉರುಳುಸೇವೆ

01:26 PM Aug 17, 2024 | Team Udayavani |

ಉಡುಪಿ: ಆದಿಉಡುಪಿ (ಎಪಿಎಂಸಿ) ಕೃಷಿ ಉತ್ಪನ್ನ ಮಾರುಕಟ್ಟೆಯ ನಿವೇಶನ ಮಾರಾಟ ವಿರೋಧಿಸಿ ವರ್ತಕರು ಶನಿವಾರ (ಆ.17) ಉರುಳು ಸೇವೆ ಮಾಡುವ ಮೂಲಕ ಪ್ರತಿಭಟನೆ ನಡೆಸಿದರು.

Advertisement

ಉಡುಪಿಯ ಮಲ್ಪೆ ರಸ್ತೆಯಲ್ಲಿರುವ ಹಾದಿ ಉಡುಪಿ ಕೃಷಿ ಉತ್ಪನ್ನಗಳ ಮಾರುಕಟ್ಟೆಯ ನಿವೇಶನ ಮಾರಾಟ ವಿರೋಧಿಸಿ ವರ್ತಕರ ಪ್ರತಿಭಟನೆ ನಡೆಸಿದರು.

ಮಾರುಕಟ್ಟೆಯ ಪ್ರವೇಶ ದ್ವಾರದಲ್ಲಿ ಜಮಾಯಿಸಿದ್ದ ವರ್ತಕರು ಎಪಿಎಂಸಿ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದರು. ಎಪಿಎಂಸಿ ಅಧಿಕಾರಿಗಳ ನಡೆಯನ್ನು ಖಂಡಿಸಿ ಕಪ್ಪು ಬಾವುಟ ಪ್ರದರ್ಶನ ಮಾಡಿದರು.

Advertisement

ಎಪಿಎಂಸಿಯ 11 ನಿವೇಶನದ ಸರ್ವೇಗೆ ಆಗಮಿಸಿದ್ದ ಅಧಿಕಾರಿಗಳನ್ನು ವರ್ತಕರು ತರಾಟೆಗೆ ತೆಗೆದುಕೊಂಡರು. ನೋಟಿಸ್ ನೀಡದೆ ಸರ್ವೇ, ಸರಕಾರಿ ಜಾಗವನ್ನು ಯಾವುದೇ ಕಾರಣಕ್ಕೂ ಮಾರಾಟ ಮಾಡಲು ಅವಕಾಶ ನೀಡುವುದಿಲ್ಲ. ಇದು ಕಾನೂನು ಬಾಹಿರ, ರೈತರ ನೋವನ್ನು ಕೇಳುವವರಿಲ್ಲ, ಈ ಕೂಡಲೇ ಅಧಿಕಾರಿಗಳು ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ವರ್ತಕರು ಆಗ್ರಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next