Advertisement

ಉಡುಪಿ: ಪೊಲೀಸ್‌ ಬೈಕನ್ನೇ ಹೊತ್ತೂಯ್ದ ಕಳ್ಳ!

08:00 AM Sep 04, 2017 | Team Udayavani |

ಉಡುಪಿ: ಉಡುಪಿ ಸಿಟಿ ಬಸ್‌ ನಿಲ್ದಾಣ ಬಳಿ ನಿಲ್ಲಿಸಿದ್ದ ಮಲ್ಪೆಯ ಕರಾವಳಿ ಕಾವಲು ಪಡೆಯ ಸಹಾಯಕ ಪೊಲೀಸ್‌ ಉಪನಿರೀಕ್ಷಕ ಗೋಪಾಲಕೃಷ್ಣ ಅವರ ಬೈಕ್‌ನ್ನು ಕಳವುಗೈದ ಘಟನೆ ಆ. 31 ರ ಸಂಜೆ 4.30 ರಿಂದ 7.30 ರೊಳಗೆ ಸಂಭವಿಸಿದೆ. 

Advertisement

ಗೋಪಾಲಕೃಷ್ಣ ಅವರು ನೆರೆಮನೆಯ ವಿರೋಪಾಕ್ಷ ಅವರಿಂದ ಕೆಲ ದಿನಗಳ ಹಿಂದೆ 30 ಸಾವಿರ ರೂ. ಮೌಲ್ಯದ ಈ ಬೈಕ್‌ ಖರೀದಿಸಿದ್ದು, ಆ. 31 ರಂದು ಸಂಜೆ 4 .30ಕ್ಕೆ ಸಿಟಿ ಬಸ್‌ ನಿಲ್ದಾಣ ಬಳಿಯ ಆರ್‌. ಕೆ. ಟೈಲರ್‌ ಶಾಪ್‌ ಬಳಿ ನಿಲ್ಲಿಸಿ ಕರ್ತವ್ಯ ಸಲುವಾಗಿ ಉದ್ಯಾವರಕ್ಕೆ ಹೋಗಿ ಸಂಜೆ 7.30ಕ್ಕೆ ವಾಪಾಸು ಬಂದು ನೋಡಿದಾಗ ಬೈಕ್‌ ಕಳವಾಗಿದೆ. 

ಆನಂತರ ಎಲ್ಲ ಕಡೆ ಹುಡುಕಾಟ ನಡೆಸಿದರೂ ದ್ವಿಚಕ್ರ ವಾಹನ ಮಾತ್ರ ಸಿಗಲಿಲ್ಲ. ಈ ಬೈಕ್‌ನ ದಾಖಲಾತಿ ಬದಲಾಯಿಸಲು ಗೋಪಾಲಕೃಷ್ಣ ಅವರು ಆರ್‌ಟಿಒ ಕಚೇರಿಗೆ ಕೋರಿಕೆ ಪತ್ರ ಸಲ್ಲಿಸಿದ್ದರಷ್ಟೇ. ಉಡುಪಿ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next