Advertisement

Udupi: ಮದ್ಯದಂಗಡಿಗೆ ಪೊಲೀಸ್‌ ನೋಟಿಸ್ : ಕೋರ್ಟ್‌ ತಡೆಯಾಜ್ಞೆ

09:25 PM Aug 27, 2024 | Team Udayavani |

ಉಡುಪಿ: ಮಣಿಪಾಲದಲ್ಲಿ ಮದ್ಯ ಮಾರಾಟಕ್ಕೆ ಸಂಬಂಧಿಸಿ ಡಿಜೆ, ಲೌಡ್‌ಸ್ಪೀಕರ್‌ ಅಳವಡಿಕೆ ಮತ್ತು ಸಮಯ ಮಿತಿ ಬಗ್ಗೆ ವಿವರಿಸಿ ನೊಟೀಸ್‌ ನೀಡಿದ್ದ ಪೊಲೀಸ್‌ ಇಲಾಖೆ ಕ್ರಮಕ್ಕೆ ಹೈಕೋರ್ಟ್‌ ತಡೆಯಾಜ್ಞೆ ನೀಡಿದೆ.

Advertisement

ಮಣಿಪಾಲ ಪೊಲೀಸ್‌ ಠಾಣೆ ವ್ಯಾಪ್ತಿಯ ಮದ್ಯ ಮಾರಾಟ ಸನ್ನದುಗಳನ್ನು ರಾತ್ರಿ 10 ಗಂಟೆಗೆ ಬಂದ್‌ ಮಾಡುವಂತೆ ಪೊಲೀಸರು ಮೌಖಿಕವಾಗಿ ಸೂಚಿಸಿದ್ದು, ಮ್ಯೂಸಿಕ್‌ ಅಳವಡಿಸಲು ಅವಕಾಶ ನೀಡುತ್ತಿರಲಿಲ್ಲ. ಆ. 6ರಂದು ಮಣಿಪಾಲ ವೃತ್ತ ನಿರೀಕ್ಷಕರು ನೋಟೀಸ್‌ ನೀಡಿ, ಬಾರ್‌ ಆ್ಯಂಡ್‌ ರೆಸ್ಟೋರೆಂಟ್‌ಗಳ ಒಳಗೆ ಡಿಜೆ, ಲೌಡ್‌ ಸ್ಪೀಕರ್‌, ನೃತ್ಯ ಮಾಡಲು ಅವಕಾಶ ಇಲ್ಲ. ಸಿಎಲ್‌ 7ರಲ್ಲಿ ಲೌಡ್‌ ಸ್ಪೀಕರ್‌, ಡಿಜೆ ಅಳವಡಿಸುವುದು ನಿಯಮಾವಳಿ ಉಲ್ಲಂಘನೆಯಾಗುತ್ತದೆ. ಕೂಡಲೇ ತೆರವುಗೊಳಿಸುವಂತೆ, ಇಲ್ಲವಾದಲ್ಲಿ ಲೈಸನ್ಸ್‌ ರದ್ದುಪಡಿಸಲು ಕ್ರಮ ವಹಿಸಲಾಗುವುದು ಎಂದು ನೋಟೀಸ್‌ ನೀಡಿದ್ದರು.

ಮಣಿಪಾಲದಲ್ಲಿ ಸಿಎಲ್‌2, ಸಿಎಲ್‌4, ಸಿಎಲ್‌9, ಸಿಎಲ್‌7 ಸನ್ನದು ವ್ಯವಹಾರ ಸಮಯ ಅನುಕ್ರಮವಾಗಿ ರಾತ್ರಿ 10.30, 12 ಗಂಟೆ, 11.30, 12 ಗಂಟೆ ಸಮಯದವರೆಗೆ ಅವಕಾಶ ಇರುತ್ತದೆ. ಪೊಲೀಸ್‌ ಇಲಾಖೆಯಿಂದ ಆಗುತ್ತಿರುವ ಸಮಸ್ಯೆ ಬಗ್ಗೆ ಸರಕಾರ ಅಪರ ಮುಖ್ಯ ಕಾರ್ಯದರ್ಶಿ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ, ಅಬಕಾರಿ ಆಯುಕ್ತರಿಗೆ, ಜಿಲ್ಲಾಧಿಕಾರಿ ಅವರಿಗೂ ಈ ಬಗ್ಗೆ ಮನವಿ ನೀಡಲಾಗಿತ್ತು.

ಸಮಸ್ಯೆ ಬಗೆಹರಿಯದ ಹಿನ್ನೆಲೆಯಲ್ಲಿ ಹೈಕೋರ್ಟ್‌ನಲ್ಲಿ ರಿಟ್‌ ಪಿಟಿಶನ್‌ ದಾಖಲಿಸಿದ್ದು, ನ್ಯಾಯಾಧೀಶರು ಪೊಲೀಸ್‌ ಇಲಾಖೆ ನೀಡಿದ್ದ ನೋಟಿಸ್ ನ 8ನೇ ಅಂಶಕ್ಕೆ ತಡೆಯಾಜ್ಞೆ ನೀಡಿದ್ದು, ಸನ್ನದು ಷರತ್ತಿನಂತೆ ನಮೂದಿಸಿರುವ ಅವಧಿ ಪ್ರಕಾರ ಸನ್ನದು ನಡೆಸುವಂತೆ ಅವಕಾಶ ನೀಡಿದ್ದಾರೆ. ಅರ್ಜಿದಾರರ ಪರವಾಗಿ ಎಸ್‌. ಮಹೇಶ್‌ ಕಿರಣ್‌ ಶೆಟ್ಟಿ ವಾದ ಮಂಡಿಸಿದ್ದಾರೆ ಎಂದು ಜಿಲ್ಲಾ ವೈನ್‌ ಮರ್ಚೆಂಟ್ಸ್‌ ಅಸೋಸಿಯೇಶನ್‌ ಅಧ್ಯಕ್ಷ ಗೋವಿಂದ್‌ರಾಜ್‌ ಹೆಗ್ಡೆ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next