Advertisement

Udupi: ಮದ್ಯದ ನಶೆಯಲ್ಲಿ ವ್ಯಕ್ತಿ; ಅಸಹಾಯಕ ಮಗುವಿನ ರಕ್ಷಣೆ

08:03 PM Sep 18, 2024 | Team Udayavani |

ಉಡುಪಿ: ಇಂದ್ರಾಳಿ ರೈಲ್ವೇ ಸೇತುವೆ ಬಳಿ ಮದ್ಯದ ನಶೆಯಲ್ಲಿದ್ದ ಅಪರಿಚಿತ ವ್ಯಕ್ತಿಯ ಬಳಿ ಅಸಹಾಯಕ ಸ್ಥಿತಿಯಲ್ಲಿದ್ದ ಗಂಡು ಮಗುವನ್ನು ಮಂಗಳವಾರ ರಕ್ಷಿಸಲಾಗಿದೆ.

Advertisement

ಸ್ಥಳೀಯರಿಂದ ಮಾಹಿತಿ ಪಡೆದ ಸಮಾಜಸೇವಕ ನಿತ್ಯಾನಂದ ಒಳಕಾಡು ಅವರು ಮಹಿಳಾ ಪೊಲೀಸರ ಮೂಲಕ ಮಗುವನ್ನು ರಕ್ಷಿಸಿ ಲಕ್ಷ್ಮೀನಗರದ ಕೃಷ್ಣಾನುಗ್ರಹ ದತ್ತು ಸ್ವೀಕಾರ ಕೇಂದ್ರದಲ್ಲಿ ಆಶ್ರಯದಲ್ಲಿ ಸುರಕ್ಷಿತವಾಗಿರಿಸಿದ್ದಾರೆ. ಮಕ್ಕಳ ರಕ್ಷಣ ಘಟಕದ ಪ್ರಕಾಶ್‌ ನಾಯ್ಕ್, ಮನೋಜ್‌ ಉಪಸ್ಥಿತರಿದ್ದರು.

ರಕ್ಷಿಸಲ್ಪಟ್ಟ ಮಗುವಿಗೆ ಸುಮಾರು ಎರಡೂವರೆ ವರ್ಷ ಎಂದು ಅಂದಾಜಿಸಲಾಗಿದೆ. ಮದ್ಯಪಾನ ಮಾಡಿರುವ ಅಪರಿಚಿತ ವ್ಯಕ್ತಿ ತಾನು ಬೆಂಗಳೂರಿನ ರಾಮನಗರದ ನಿವಾಸಿ ಎಂದು ಗುರುತು ಹೇಳಿದ್ದು, ಮಗುವಿನ ತಂದೆ ತಾನೆಂದು ತಿಳಿಸಿ‌ದ್ದಾನೆ. ದಾಖಲೆಗಳು ಇಲ್ಲದಿರುವುದು ಮತ್ತು ನೀಡಿರುವ ವಿವರಗಳು ಅಸ್ಪಷ್ಟವಾಗಿದ್ದರಿಂದ ಮಗುವಿನ ಹೆತ್ತವರು ಯಾರೆಂದು ತನಿಖೆಯಿಂದ ತಿಳಿದುಬರಬೇಕಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next