Advertisement

ಉಡುಪಿ: ಬಿಜೆಪಿಯ ಕೈ ಹಿಡಿದದ್ದು ಹೊಸ ಮತದಾರರು?

11:55 AM May 17, 2018 | Harsha Rao |

ಉಡುಪಿ: ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ “ಸ್ವೀಪ್‌’ ಮಾಡಿದ ಕೀರ್ತಿ ಬಿಜೆಪಿಗೆ. ಮೋದಿ ಅಲೆ ಮತ್ತು “ಹಿಂದುತ್ವ’ ಫ್ಯಾಕ್ಟರ್‌ ಅಂಶಗಳು ಬಿಜೆಪಿಯನ್ನು ಕೈ ಹಿಡಿದಿರ ಬಹುದು. ಆದರೆ ಹೊಸ ಮತದಾರರು ಮೋದಿ ಅಲೆಗೆ ತಲೆದೂಗಿದರೇ?

Advertisement

ಇಂಥದೊಂದು ವ್ಯಾಖ್ಯಾನ ಕೇಳಿ ಬಂದಿರು ವುದು ಉಡುಪಿ ಜಿಲ್ಲೆಯ ಕ್ಷೇತ್ರಗಳಲ್ಲಿ. ಪ್ರಧಾನಿ ಮೋದಿ ಉಡುಪಿಗೆ ಬಂದ ಬಳಿಕ ಆಲೆಯ ತೀವ್ರತೆ ಹೆಚ್ಚಿತ್ತು. 2013ಕ್ಕಿಂತ ಈ ಬಾರಿ ಸರಾಸರಿ ಒಂದು ಕ್ಷೇತ್ರಕ್ಕೆ 20 ಸಾವಿರದಂತೆ ಐದೂ ಕ್ಷೇತ್ರಗಳಲ್ಲಿ 1 ಲಕ್ಷ ಹೊಸ ಮತದಾರರಿದ್ದರು. ಇವರಲ್ಲಿ ಬಹುತೇಕರು ಮೋದಿಯನ್ನು ಮೆಚ್ಚಿ ಕೊಂಡಂತಿದೆ. ಮೋದಿಯವರಿಗೂ ಈ ಅಂಶ  ಬಹುಶಃ ಗೊತ್ತಿತ್ತು. ಯಾಕೆಂದರೆ, ಅವರೂ ತಮ್ಮ ಭಾಷಣದಲ್ಲಿ ಕಾಮನ್‌ ವೆಲ್ತ್‌ ಬೆಳ್ಳಿ ಪದಕ ವಿಜೇತ ಗುರುರಾಜ್‌ ಅವರ ಬಗ್ಗೆ ಎರಡೆರಡು ಬಾರಿ ಪ್ರಸ್ತಾಪಿಸಿ ಅಭಿನಂದಿಸಿದ್ದರು. ಇಲ್ಲಿನ (ಕರಾವಳಿಯ) ಯುವಜನರೆಲ್ಲಾ ಬಹಳ ವಿದ್ಯಾವಂತರು, ಬುದ್ಧಿವಂತರು, ಪರಿಶ್ರಮಿಗಳು ಎಂದು ಹೊಗಳಿದ್ದರು.

ಸ್ವಾವಲಂಬನೆಯ ಆಸಕ್ತಿ ಉಳ್ಳ ನಿಮ್ಮಂಥವರಿಗೇ ಸಹಾಯ ಮಾಡಲು ಮುದ್ರಾ ಯೋಜನೆ ತಂದಿದ್ದಾಗಿಯೂ ಹೇಳಿದ್ದರು. ಸ್ಥಳೀಯ ಯುವಜನರು ಹೊರಗೆಲ್ಲೋ ಹೋಗಿ ದುಡಿಯುವುದಕ್ಕಿಂತ ಇಲ್ಲಿಯೇ ಉದ್ಯೋಗ ಸೃಷ್ಟಿ ಯಾಗಬೇಕು ಎಂದಿದ್ದರು. ಇವೆಲ್ಲವೂ ಯುವಜನರ ಮೇಲೆ ಪ್ರಭಾವ ಬೀರಲು ಮಾಡಿದ ಪ್ರಯತ್ನ. ಇವೆಲ್ಲವೂ ಫ‌ಲ ಕೊಟ್ಟಂತಿದೆ.

ಮತ್ತಷ್ಟು ಅಂಶ
ಪ್ರಮೋದ್‌ ಮಧ್ವರಾಜ್‌ ಬಿಜೆಪಿಗೆ ಸೇರ್ಪಡೆ ಗೊಳ್ಳುತ್ತಾರೆಂಬ ಗುಮಾನಿ ಕಾಂಗ್ರೆಸ್‌ ಪಕ್ಷ ದೊಳಗಿನ ತಲ್ಲಣಕ್ಕೆ ಕಾರಣವಾಯಿತು. ಇದೂ ಸಹ ಬಿಜೆಪಿಗೆ ಅನುಕೂಲ ಕಲ್ಪಿಸಿತು. ಹಾಗೆಯೇ ಕಾಪುವಿನಲ್ಲಿ ಪಕ್ಷದೊಳಗಿದ್ದ ಕೆಲವು ಅಸಮಾ ಧಾನಗಳು ವಿನಯಕುಮಾರ ಸೊರಕೆಗೆ ಮುಳುವಾಯಿತು ಎನ್ನಲಾಗುತ್ತಿದೆ. ಕಾಂಗ್ರೆಸ್‌ ಪಕ್ಷಕ್ಕೆ ಸೇರಿದ ಕೆಲವು ನಾಯಕರ ಬಗೆಗೆ ಪಕ್ಷ ದೊಳಗೆ ಅಸಮಾಧಾನವಿತ್ತು ಎನ್ನಲಾಗುತ್ತಿದೆ. 

ಬೈಂದೂರು ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಗೋಪಾಲ ಪೂಜಾರಿಯವರು ಗೆದ್ದೇ ಗೆಲ್ಲು ತ್ತೇವೆಂಬ ಹುಮ್ಮಸ್ಸು ಹೊಂದಿದ್ದರೂ ಅಲ್ಲಿ ಬಿಜೆಪಿ ಗೆಲ್ಲಲು ಮೋದಿ ಅಲೆ ಹಾಗೂ ಸುಕುಮಾರ ಶೆಟ್ಟಿಯವರ ಮೇಲಿದ್ದ ಅನುಕಂಪ ಎಂಬ ಅಭಿಪ್ರಾಯವಿದೆ. ಹೊನ್ನಾವರದಲ್ಲಿ ಪರೇಶ ಮೇಸ್ತರ ಸಾವು, ಈ ಕುರಿತು ಗಂಗೊಳ್ಳಿ ಮೊದ ಲಾದೆಡೆ ನಡೆದ ಪ್ರತಿಭಟನೆಯಲ್ಲಿ ಸ್ಥಳೀಯ ಖಾರ್ವಿ ಸಮುದಾಯದವರ ಪಾಲ್ಗೊಳ್ಳುವಿಕೆ ಇಲ್ಲಿ ಪರಿಣಾಮ ಬೀರಿರುವಂತಿದೆ. 

Advertisement

ಇನ್ನು ಕುಂದಾಪುರ ಮತ್ತು ಕಾರ್ಕಳ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಷ್ಟೊಂದು ಗೆಲ್ಲುವ ವಿಶ್ವಾಸ ಹೊಂದಿರಲಿಲ್ಲ. ಇದಕ್ಕೆ ಪೂರಕವಾಗಿ ಕುಂದಾ ಪುರದ ಕಾಂಗ್ರೆಸ್‌ ರಾಕೇಶ್‌ ಮಲ್ಲಿಯವರು ಹೊರಗಿನವರು ಎಂಬ ಅಪವಾದಕ್ಕೆ ಗುರಿ ಯಾದರು. ಕಾರ್ಕಳದಲ್ಲಿ ಅಭ್ಯರ್ಥಿ ಆಯ್ಕೆ ಯಲ್ಲಿ ಉಂಟಾದ ಗೊಂದಲ ಬಿಜೆಪಿಗೆ ವರದಾನ ವಾಯಿತು ಎಂಬ ವ್ಯಾಖ್ಯಾನ ಪ್ರಚಲಿತದಲ್ಲಿದೆ.

Advertisement

Udayavani is now on Telegram. Click here to join our channel and stay updated with the latest news.

Next