Advertisement

ಉಡುಪಿ : ಕಲ್ಲಿನ ಕ್ವಾರಿಗೆ ಬಿದ್ದು ತಾಯಿ ಮಗು ದಾರುಣ ಸಾವು 

02:44 PM Apr 25, 2017 | Team Udayavani |

ಉಡುಪಿ: ಅಲೆವೂರಿನ ದುರ್ಗಾನಗರದಲ್ಲಿ ಬಟ್ಟೆ ಒಗೆಯಲೆಂದು ತೆರಳಿದ್ದ ತಾಯಿ,ಮಗು ಕಲ್ಲಿನ ಕ್ವಾರಿಗೆ ಬಿದ್ದು ದಾರುಣವಾಗಿ ಸಾವನ್ನಪ್ಪಿದ ದುರ್ಘ‌ಟನೆ ಮಂಗಳವಾರ ಮಧ್ಯಾಹ್ನ ಸಂಭವಿಸಿದೆ. 

Advertisement

ಮೃತರು ಬಾಗಲಕೋಟೆಯ ಹುನಗುಂದ ಮೂಲದ ನೀಲವ್ವ(28)ಮತ್ತು ಪುತ್ರ ಹನುಮಂತ (6) ಎಂದು ತಿಳಿದು ಬಂದಿದೆ. ಹನುಮಂತ ಮೊದಲು ನೀರಿಗೆ ಬಿದ್ದಿದ್ದು ರಕ್ಷಿಸಲು ತೆರಳಿದ್ದ ತಾಯಿಯೂ ದಾರುಣವಾಗಿ ಸಾವನ್ನಪ್ಪಿರುವ ಬಗ್ಗೆ ವರದಿಯಾಗಿದೆ. 

ನೀಲವ್ವ ಪತಿ ಮೇಸ್ತ್ರಿ ಕೆಲಸ ಮಾಡಿಕೊಂಡಿದ್ದು ಕಳೆದ ಕೆಲ ವರ್ಷಗಳಿಂದ ಅಲೆವೂರಿನಲ್ಲಿ ನೆಲೆಸಿದ್ದರು ಎಂದು ತಿಳಿದು ಬಂದಿದ್ದು, ಇನ್ನಿಬ್ಬರು ಚಿಕ್ಕ ಪ್ರಾಯದ ಹೆಣ್ಣು ಮಕ್ಕಳಿದ್ದಾರೆ ಎಂದು ತಿಳಿದು ಬಂದಿದೆ. 

ಮಣಿಪಾಲ ಪೊಲೀಸರು ಸ್ಥಳಕ್ಕೆ ತೆರಳಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next