Advertisement

Udupi ಕರ್ಕಶ ಹಾರ್ನ್: ಖಾಸಗಿ ಬಸ್‌ ಪೊಲೀಸ್‌ ವಶಕ್ಕೆ

10:00 PM Jun 29, 2024 | Team Udayavani |

ಉಡುಪಿ: ಉಡುಪಿ ನಗರ ಭಾಗದಲ್ಲಿ ಕರ್ಕಶ ಹಾರ್ನ್ ಮಾಡಿಕೊಂಡು ಬರುತ್ತಿದ್ದ ಖಾಸಗಿ ಬಸ್‌ ಅನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

Advertisement

ಜೋಡುಕಟ್ಟೆಯ ಬಳಿ ವಾಹನ ತಪಾಸಣೆ ನಡೆಸುತ್ತಿದ್ದಾಗ ಖಾಸಗಿ ಬಸ್‌ ಚಾಲಕ ಭೋಜರಾಜ್‌, ಬಸ್ಸಿನ ಹಾರ್ನ್ ನಿಂದ ಕರ್ಕಶ ಶಬ್ದವನ್ನು ಹೊರಹೊಮ್ಮಿಸಿ ಸಾರ್ವಜನಿಕರಿಗೆ ತೊಂದರೆ ಉಂಟುಮಾಡುತ್ತಿದ್ದ. ಆತನಿಗೆ ಆತನ ತಪ್ಪಿನ ಬಗ್ಗೆ ತಿಳಿಸಿ ಬಸ್‌ ಅನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next