Advertisement

ಉಡುಪಿ:ಕಲ್ಯಾಣಪುರ ಕುದ್ರು ಪ್ರದೇಶದಲ್ಲಿ ಹಲವೆಡೆ ಜಲಾವೃತ

02:13 PM Jul 08, 2022 | Team Udayavani |

ಉಡುಪಿ: ತಾಲೂಕಿನಾದ್ಯಂತ ಗುರುವಾರ ತಡರಾತ್ರಿ, ಶುಕ್ರವಾರ ಮುಂಜಾನೆ ವ್ಯಾಪಕ ಮಳೆಯಾಗಿದ್ದು, ಕಡಲ ತೀರದ ಗ್ರಾಮದಲ್ಲಿ ನೆರೆ ಆತಂಕ ಮನೆ ಮಾಡಿದೆ.‌ ಕಲ್ಯಾಣಪುರ ಗ್ರಾಮ ವ್ಯಾಪ್ತಿಯಲ್ಲಿ ನದಿಗಳು ತುಂಬಿ ಹರಿಯುತ್ತಿದ್ದು, ಇಲ್ಲಿನ ಕಡವಿನ ಬಾಗಿಲು ಸಹಿತ ಇನ್ನಿತರೆ ಕುದ್ರು ಪ್ರದೇಶಗಳು ಜಲಾವೃತವಾಗಿದೆ.

Advertisement

150ಕ್ಕೂ ಹೆಚ್ಚಿನ ಮನೆಗಳು ನೆರೆ ಆತಂಕದಲ್ಲಿವೆ. ಬಹುತೇಕ ತೆಂಗಿನ ತೋಟಗಳಿಗೆ ನೀರು ನುಗ್ಗಿದೆ. ಮಧ್ಯಾಹ್ನ ಬಳಿಕ‌ ಮಳೆ ಕೊಂಚ ತಗ್ಗಿದ್ದು, ಕೆಲವು ಕಡೆಗಳಲ್ಲಿ ನೆರೆ ಇಳಿಮುಖವಾಗಿದೆ.‌

ನದಿ ಪಾತ್ರದ ಜನರು ಕೆಲವೆಡೆ ನೆರೆ ಇಳಿಮುಖವಾದರೂ ಮತ್ತೆ ಮಳೆ ಬಂದು ನೆರೆ ಏರುವ ಆತಂಕದಲ್ಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next