Advertisement

Udupi; ಗೀತಾರ್ಥ ಚಿಂತನೆ-49: ಕೊನೆಯಲ್ಲೂ ಧೃತರಾಷ್ಟ್ರನ ಲಾಭದ ದೃಷ್ಟಿ

01:27 AM Sep 29, 2024 | Team Udayavani |

ಗೀತೆಯ ಮೊದಲ ಅಧ್ಯಾಯಕ್ಕೆ ಯಾವ ಆಚಾರ್ಯರೂ ಭಾಷ್ಯವನ್ನು ಬರೆದಿಲ್ಲ. ಇದು ಅರ್ಜುನ ವಿಷಾದ ಎಂಬುದು ಎಲ್ಲರಿಗೂ ಗೊತ್ತಿದ್ದದ್ದೆ. ಮೊದಲ ಶ್ಲೋಕವನ್ನು ಧೃತರಾಷ್ಟ್ರ ಹೇಳುತ್ತಾನೆ. ಧೃತಂ ರಾಷ್ಟ್ರಂ ಏನಃ:= ದೇಶವನ್ನು ರಕ್ಷಿಸುವವ ಹೇಳುತ್ತಾನೆಂಬ ಧ್ವನ್ಯಾರ್ಥವಿದೆ.

Advertisement

ತನ್ನ ಮಕ್ಕಳು ಏನು ಮಾಡುತ್ತಿದ್ದಾರೆಂದು ದೇಶವನ್ನು ರಕ್ಷಿಸುವವ ಹೇಳುತ್ತಾನೆ. ಪ್ರಧಾನಿ, ಮುಖ್ಯಮಂತ್ರಿ, ಸಚಿವರು ದೇಶ, ರಾಜ್ಯ, ಸಮಾಜವನ್ನು ರಕ್ಸಿಸಬೇಕಾದವರು ತಮ್ಮ ಮಕ್ಕಳು, ತಮ್ಮ ಕುಟುಂಬವನ್ನು ಉದ್ಧಾರ ಮಾಡುತ್ತಿದ್ದರೆ ಏನಾದೀತು? ಯುದ್ಧವನ್ನು ನೋಡಲು ಶಕ್ತಿ ಕೊಡುತ್ತೇನೆಂದು ವೇದವ್ಯಾಸರು ಹೇಳಿದರೂ ಧೃತರಾಷ್ಟ್ರ ಕೇಳಿರಲಿಲ್ಲ. ಆಗ ಸಂಜಯನಿಗೆ ದಿವ್ಯದೃಷ್ಟಿಯನ್ನು ನೀಡಲಾಯಿತು. ಸಂಜಯ ಹೇಳಿದ್ದನ್ನು ವೇದವ್ಯಾಸರು ಬರೆದರು. ಹಿಂದೆ ಯುದ್ಧವನ್ನು ತಪ್ಪಿಸು ಮಾರಾಯ ಎಂದು ಕೇಳಿಕೊಂಡಾಗ “ನನ್ನದೇನಿದೆ? ಎಲ್ಲವೂ ದೇವರ ಕೈಯಲ್ಲಿದೆ’ (ಸರ್ವಂ ವಶೇ) ಎಂದು ವೇದಾಂತವನ್ನು ಹೇಳಿದವ ಇದೇ ಧೃತರಾಷ್ಟ್ರ.

“ಧರ್ಮಕ್ಷೇತ್ರೇ ಕುರುಕ್ಷೇತ್ರೇ ಸಮವೇತಾ ಯುಯುತ್ಸವಃ| ಮಾಮಕಾಃ ಪಾಂಡವಾಶ್ಚೈವ ಕಿಮಕುರ್ವತ ಸಂಜಯ||’- ಗೀತೆಯ ಮೊದಲ ಶ್ಲೋಕ. ಕ್ಷೇತ್ರಕ್ಕೆ ಬಂದು ಪಾಪ ಮಾಡಬಾರದು ಎಂಬ ಮಾತಿದೆ. ಇದು ಧರ್ಮಕ್ಷೇತ್ರ. ಪಾಂಡವರು ಹೇಗಿದ್ದರೂ ಧಾರ್ಮಿಕರು, ಯುದ್ಧ ಬೇಡವೆಂದು ಬಿಟ್ಟು ಕೊಟ್ಟರೆ ತನ್ನ ಮಕ್ಕಳಿಗೆ ಲಾಭವಾಗುತ್ತದೆ ಎಂಬ ಲೆಕ್ಕಾಚಾರ ಧೃತರಾಷ್ಟ್ರನದು.

-ಶ್ರೀಸುಗುಣೇಂದ್ರತೀರ್ಥ ಶ್ರೀಪಾದರು,
ಪರ್ಯಾಯ ಶ್ರೀಪುತ್ತಿಗೆ ಶ್ರೀಕೃಷ್ಣಮಠ,

ಕೋಟಿ ಗೀತಾ ಲೇಖನ ಯಜ್ಞದಲ್ಲಿ ಪಾಲೊಳ್ಳಿ
ಗೀತಾ ಮಂದಿರ,ಉಡುಪಿ
ಸಂಪರ್ಕ ಸಂಖ್ಯೆ: 8055338811

Advertisement
Advertisement

Udayavani is now on Telegram. Click here to join our channel and stay updated with the latest news.

Next