Advertisement

ಉಡುಪಿ ಜಿಲ್ಲೆಯಲ್ಲಿ ಭರ್ಜರಿ ಮಳೆ ; ರೈತರಲ್ಲಿ ಹರ್ಷ 

04:52 PM Aug 19, 2017 | Team Udayavani |

ಉಡುಪಿ : ಜಿಲ್ಲೆಯಲ್ಲಿ  ಕಳೆದ ಕೆಲದಿನಗಳಿಂದ ವಿರಳವಾಗಿದ್ದ ಮುಂಗಾರು ಮಳೆ ಗುರುವಾರ ರಾತ್ರಿಯಿಂದ ಬಿರುಸು ಪಡೆದುಕೊಂಡಿದ್ದು ಜಿಲ್ಲಾಧ್ಯಂತ ಶುಕ್ರವಾರ ಭರ್ಜರಿ ಮಳೆಯಾಗಿದೆ. 

Advertisement

ಕಾರ್ಕಳ, ಕುಂದಾಪುರ ಮತ್ತು ಉಡುಪಿ ತಾಲೂಕಿನಲ್ಲಿ ಬೆಳಗಿನಿಂದಲೂ ಭರ್ಜರಿ ಮಳೆ ಸುರಿದಿದೆ. ಸಂಜೆಯ ವೇಳೆಗೆ ಸ್ವಲ್ಪ ವಿರಾಮ ನೀಡಿತ್ತು. ಕೆಲವೆಡೆ ರಸ್ತೆಗೆ ಮರಗಳು ಮತ್ತು ವಿದ್ಯುತ್‌ ಕಂಬಗಳು ಉರುಳಿರುವ ಬಗ್ಗೆ ವರದಿಯಾಗಿದೆ.

ಇನ್ನೂ 2 ದಿನ ಮಳೆ ಮುಂದುವರಿಯುವ ಸಾಧ್ಯತೆಗಳಿವೆ ಎಂದು ಹವಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮೀನುಗಾರರು ಎಚ್ಚರಿಕೆ ವಹಿಸಬೇಕೆಂದು ಕರೆ ನೀಡಲಾಗಿದೆ.

ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡದಲ್ಲೂ ಉತ್ತಮ ಮಳೆಯಾಗಿರುವ ಬಗ್ಗೆ ವರದಿಯಾಗಿದೆ.

ಮಳೆಯಿಲ್ಲದೆ ಕಂಗಾಲಾಗಿದ್ದ ರೈತರು ಮಳೆಯಿಂದಾಗಿ ಸಂತಸ ಪಟ್ಟಿದ್ದಾರೆ. ಇನ್ನೂ ನಾಲ್ಕು ದಿನ ಮಳೆ ಬರಲಿ , ಚೌತಿಗೆ ವಿರಾಮ ನೀಡಲಿ ಎನ್ನುವುದು ಎಲ್ಲರ ಪ್ರಾರ್ಥನೆಯಾಗಿದೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next