Advertisement

Udupi ಜಿಲ್ಲಾಸ್ಪತ್ರೆಯ ಕಾರಿಡಾರ್‌ನಲ್ಲಿ ಗಲಾಟೆ: ಆರೋಪಿಗಳು ವಶಕ್ಕೆ

12:36 AM Aug 27, 2023 | Team Udayavani |

ಉಡುಪಿ: ಜಿಲ್ಲಾಸ್ಪತ್ರೆಯ ಕಾರಿಡಾರ್‌ನಲ್ಲಿ ಗಲಾಟೆ ಮಾಡುತ್ತಿದ್ದ ವ್ಯಕ್ತಿಗಳನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

Advertisement

ನಗರ ಠಾಣೆಯ ಎಎಸ್‌ಐ ತಾರಾನಾಥ ಅವರು ಹೊಯ್ಸಳ ವಾಹನದಲ್ಲಿ ರೌಂಡ್ಸ್‌ ಕರ್ತವ್ಯದಲ್ಲಿದ್ದಾಗ ಬಂದ ಮಾಹಿತಿಯಂತೆ ಸಿಬಂದಿಯೊಂದಿಗೆ ಜಿಲ್ಲಾಸ್ಪತ್ರೆಗೆ ಹೋಗಿ ಪರಿಶೀಲಿಸಿದಾಗ ಆಸ್ಪತ್ರೆಯ ಪುರುಷರ ಸರ್ಜಿಕಲ್‌ ವಾರ್ಡ್‌ನ ಹತ್ತಿರದ ಕಾರಿಡಾರ್‌ನಲ್ಲಿ ಆರೋಪಿಗಳಾದ ಮಲ್ಲಾರಿನ ಮಹಮ್ಮದ್‌ ಅಬ್ದುಲ್‌ ಅಜೀಜ್‌ (29), ಮಹಮ್ಮದ್‌ ನಾಜೀಮ್‌ (36), ಇಮ್ತಿಯಾಜ್‌(40) ಅವರು ತಮ್ಮೊಳಗೆ ಪರಸ್ಪರ ಜಗಳ ಮಾಡಿಕೊಂಡು ಆಸ್ಪತ್ರೆಯಲ್ಲಿ ದಾಖಲಾಗಿದ್ದ ರೋಗಿಗಳಿಗೆ ಭಯದ ವಾತಾವರಣ ಉಂಟುಮಾಡುತ್ತಿದ್ದರು.

ಈ ವೇಳೆ ಅಬ್ದುಲ್‌ ಅಜೀಜ್‌ನನ್ನು ಪೊಲೀಸರು ವಶಕ್ಕೆ ಪಡೆದರು. ಆಗ ಇಮ್ತಿಯಾಜ್‌ ಅಲ್ಲಿಂದ ತಪ್ಪಿಸಿಕೊಂಡಿದ್ದು, ಮತ್ತೋರ್ವ ಆರೋಪಿ ಮಹಮ್ಮದ್‌ ನಾಜೀಮ್‌ನನ್ನು ಆಸ್ಪತ್ರೆಯಿಂದ ಡಿಸ್‌ಚಾರ್ಜ್‌ ಆದ ಬಳಿಕ ಠಾಣೆಗೆ ಹಾಜರಾಗುವಂತೆ ಪೊಲೀಸರು ತಿಳಿಸಿದ್ದಾರೆ. ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next