Advertisement
ಉಡುಪಿ, ಮಲ್ಪೆ, ಕಾರ್ಕಳ, ಕುಂದಾಪುರ, ಬೈಂದೂರಿನಲ್ಲಿ ಈಗಾಗಲೇ ಅಗ್ನಿಶಾಮಕ ಠಾಣೆ ಗಳು ಕಾರ್ಯಾಚರಣೆ ಮಾಡಿಕೊಂಡಿವೆ. ಆದರೆ ಪಡುಬಿದ್ರಿ, ಬ್ರಹ್ಮಾವರ, ಹೆಬ್ರಿ, ಮಣಿಪಾಲದಲ್ಲಿ ಅಗ್ನಿಶಾಮಕ ಠಾಣೆ ನಿರ್ಮಿಸುವ ಪ್ರಸ್ತಾವನೆ ಮತ್ತಷ್ಟು ವಿಳಂಬಗತಿಯಾಗುತ್ತಿದೆ. ಈ ನಡುವೆ 2025ರ ಮೊದಲ ತಿಂಗಳಿಗೆ ಪಡುಬಿದ್ರಿಯಲ್ಲಿ ಸುಜ್ಲಾನ್ನವರು ನೀಡಿದ ಸ್ಥಳದಲ್ಲಿ ಅಗ್ನಿಶಾಮಕ ಠಾಣೆ ನಿರ್ಮಿಸಲು ಉದ್ದೇಶಿಸಲಾಗಿದ್ದು, ಈ ಬಗ್ಗೆ ಜಿಲ್ಲೆಯ ಜನಪ್ರತಿನಿಧಿಗಳು ಸರಕಾರದ ಮೇಲೆ ಮತ್ತಷ್ಟು ಒತ್ತಡ ಹಾಕುವ ಅನಿವಾರ್ಯತೆಯೂ ಇದೆ. ಅನಂತರ ಹೆಬ್ರಿ ತಾಲೂಕು ಕಚೇರಿ ಸಂಕೀರ್ಣ, ಬ್ರಹ್ಮಾವರದ ಕೃಷಿ ಕೇಂದ್ರದ ಬಳಿ ಹಾಗೂ ಮಣಿಪಾಲ ಪೊಲೀಸ್ ಕ್ವಾಟ್ರಸ್ ಬಳಿ ಇರುವ ಸ್ಥಳದಲ್ಲಿ ಠಾಣೆ ನಿರ್ಮಿಸಲು ಉದ್ದೇಶಿಸಲಾಗಿದ್ದು, ಇನ್ನೂ ಸರಕಾರದ ಅನುಮೋದನೆ ಸಿಕ್ಕಿಲ್ಲ.
ಜಿಲ್ಲೆಯ ಎಲ್ಲ ಅಗ್ನಿಶಾಮಕ ಠಾಣೆ ಯಲ್ಲಿಯೂ ಈ ಹಿಂದೆ ತಲಾ 2 ವಾಹನಗಳಿದ್ದವು. ಆದರೆ ಈಗ ತಲಾ1 ವಾಹನಗಳಷ್ಟೇ ಕಾರ್ಯಾಚರಣೆ ಮಾಡಿಕೊಂಡಿವೆ. 15 ವರ್ಷ ಹಳೆಯ ವಾಹನಗಳು ಸುಸ್ಥಿತಿಯಲ್ಲಿದ್ದರೂ ಅದನ್ನು ಬಳಕೆ ಮಾಡಬಾರದೆಂಬ ಕೇಂದ್ರ ಸರಕಾರದ ನಿಯಮದ ಕಾರಣ ವಾಹನಗಳು ಮೂಲೆ ಸೇರಿವೆ. ರಾಜ್ಯಾದ್ಯಂತ ಈ ಸಮಸ್ಯೆ ಇದ್ದರೂ ಸರಕಾರ ಹೊಸ ವಾಹನ ಒದಗಿಸುವ ಸೂಕ್ತ ನಿರ್ಧಾರ ತೆಗೆದುಕೊಂಡರೆ ಕಾರ್ಯಾಚರಣೆಗೆ ಮತ್ತಷ್ಟು ಅನುಕೂಲವಾಗಲಿದೆ ಎಂಬುವುದು ಸಿಬಂದಿಯ ಅನಿಸಿಕೆ.
Related Articles
ಉಡುಪಿಯಲ್ಲಿ 4 ಬೋಟ್ ಹಾಗೂ 2 ಓಬಿಎಂ(ಓಟ್ ಬೋರ್ಡ್ ಮೋಟಾರ್), ಕುಂದಾಪುರ, ಮಲ್ಪೆ ಯಲ್ಲಿ ತಲಾ 2 ಬೋಟ್ 2 ಓಬಿಎಂ, ಕಾರ್ಕಳ ಹಾಗೂ ಬೈಂದೂರಿನಲ್ಲಿ ತಲಾ 1 ಬೋಟ್ ಹಾಗೂ 1 ಒಬಿಎಂಗಳಿವೆ. 21 ಬೇ ಶೀಟ್ಗಳು, 104 ಲೈಫ್ ಬಾಯ್, 126 ಲೈಫ್ ಜಾಕೆಟ್, 7 ಆಸ್ಕಾ ಲೈಟ್, 11 ಪೆಟ್ರೊಲ್ ಚೈನ್, 5 ಕಾಂಕ್ರಿಟ್ ಕಟ್ಟರ್ಗಳು ಅಗ್ನಿಶಾಮಕ ಠಾಣೆಯಲ್ಲಿವೆ. 137 ಮಂಜೂರಾದ ಸಿಬಂದಿಯ ಪೈಕಿ. 91 ಮಂದಿ ಕರ್ತವ್ಯ ನಿರ್ವಹಿಸಿಕೊಂಡಿದ್ದು, 46 ಹುದ್ದೆಗಳು ಇನ್ನು ಕೂಡ ಖಾಲಿಯಿವೆ.
Advertisement
ಸರಕಾರಕ್ಕೆ ಪ್ರಸ್ತಾವನೆಜಿಲ್ಲೆಗೆ ಹೆಚ್ಚುವರಿ ಅಗ್ನಿಶಾಮಕ ಠಾಣೆ ಹಾಗೂ ವಾಹನಗಳನ್ನು ಒದಗಿಸುವ ಬಗ್ಗೆ ಈಗಾಗಲೇ ಸರಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ. ಪ್ರಸ್ತುತ ಇರುವ ವಾಹನ ಹಾಗೂ ಸಿಬಂದಿ ಮೂಲಕ ಕಾರ್ಯಾಚರಣೆ ಮಾಡಲಾಗುತ್ತಿದೆ.
-ವಿನಾಯಕ್ ಕಲ್ಗೊಟ್ಕರ್, ಜಿಲ್ಲಾ ಅಗ್ನಿಶಾಮಕದಳದ ಅಧಿಕಾರಿ