Advertisement

ಹೊರಗಿನಿಂದ ಬಂದವರನ್ನು ಮನೆಗೆ ಸೇರಿಸುವುದನ್ನು ಆದಷ್ಟು ತಪ್ಪಿಸಿ: ಉಡುಪಿ ಡಿಸಿ

03:53 PM May 04, 2021 | Team Udayavani |

ಉಡುಪಿ: ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಕಾರಣ ದಿನದಿಂದ ದಿನಕ್ಕೆ ಪರಸ್ಥಿತಿ ಕೈ ಮೀರುತ್ತಿದೆ. ಯಾರಿಗಾದರೂ ಸೋಂಕಿನ ಲಕ್ಷಣ ಕಂಡು ಬಂದರೆ ಕೂಡಲೇ ಟೆಸ್ಟ್ ಮಾಡಿಸಿಕೊಳ್ಳಿ ಎಂದು ಉಡುಪಿ ಜಿಲ್ಲಾಧಿಕಾರಿ ಜಗದೀಶ್ ಹೇಳಿದ್ದಾರೆ.

Advertisement

ಫೇಸ್ ಬುಕ್ ವಿಡಿಯೋದಲ್ಲಿ ಮಾತನಾಡಿರುವ ಅವರು, ಮನೆಗೆ ಯಾರಾದರೂ ಹೊರಗಿನಿಂದ ಬಂದರೆ ದೂರದಲ್ಲಿ ನಿಂತು ಮಾತನಾಡಿ. ಹೊರಗಿನಿಂದ ಬಂದವರನ್ನು ಮನೆಗೆ ಸೇರಿಸುವುನ್ನು ಆದಷ್ಟು ತಪ್ಪಿಸಿ. ಹೊರಗಿನಿಂದ ಬಂದವರು ಕೆಲವು ದಿನ ಐಸಲೋಶನ್ ಗೆ ಒಳಗಾಗಬೇಕು ಎಂದಿದ್ದಾರೆ.

ಹಲವರು ಸೋಂಕಿನ ಲಕ್ಷಣ ಕಂಡುಬಂದರೆ ಟೆಸ್ಟ್ ಮಾಡಿಸದೆ ಮನೆಯಲ್ಲೇ ಇರುತ್ತಾರೆ. ಪರಿಸ್ಥಿತಿ ಗಂಭೀರವಾದ ಬಳಿಕ ಐಸಿಯುಗೆ ದಾಖಲಾಗಲು ಆಸ್ಪತ್ರೆಗೆ ಬರುತ್ತಿದ್ದಾರೆ. ಈಗಾಗಲೇ ಐಸಿಯು ಬೆಡ್ ಗಳು ತುಂಬಿದೆ. ಹೀಗಾಗಿ ಲಕ್ಷಣ ಕಂಡುಬಂದರೆ ಟೆಸ್ಟ್ ಮಾಡಿಸಿ, ಪಾಸಿಟಿವ್ ಇದ್ದರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಿರಿ ಎಂದು ಉಡುಪಿ ಡಿಸಿ ಮನವಿ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next