Advertisement

Udupi-D.K; ಪ್ರತ್ಯೇಕ ಪ್ರಕರಣ: ನಾಲ್ವರು ನಾಪತ್ತೆ

08:16 PM Sep 23, 2024 | Team Udayavani |

ಕಡಿಯಾಳಿ: ವ್ಯಕ್ತಿ ನಾಪತ್ತೆ
ಉಡುಪಿ:
ಕಡಿಯಾಳಿ ಬಾಡಿಗೆ ಮನೆಯಲ್ಲಿ ವಾಸವಿದ್ದ ವಿಜಯ ಶೆಟ್ಟಿ (57) ಸೆ. 6ರಂದು ಮನೆಯಿಂದ ಹೊರ ಹೋದವರು ವಾಪಸು ಬಾರದೆ ನಾಪತ್ತೆಯಾಗಿದ್ದಾರೆ.

Advertisement

157 ಸೆ.ಮೀ ಎತ್ತರವಿದ್ದು, ಕನ್ನಡ, ತುಳು ಹಾಗೂ ಹಿಂದಿ ಭಾಷೆ ಮಾತನಾಡುತ್ತಾರೆ. ಮಾಹಿತಿ ದೊರೆತಲ್ಲಿ ಉಡುಪಿ ನಗರ ಪೊಲೀಸ್‌ ಠಾಣೆ ಸಂಪರ್ಕಿಸಲು ಪ್ರಕಟನೆ ತಿಳಿಸಿದೆ.

ನಿಟ್ಟೂರು: ಯುವಕ ನಾಪತ್ತೆ
ಉಡುಪಿ: ಮೂಲತಃ ಒಡಿಶಾ ರಾಜ್ಯದ ನಿವಾಸಿ, ನಗರದ ನಿಟ್ಟೂರಿನ ಬಾಳಿಗ ಫಿಶ್‌ನೆಟ್‌ ಒಡಿಶಾ ಹಾಸ್ಟೆಲ್‌ನಲ್ಲಿ ವಾಸವಿದ್ದ ಬನಮಾಲಿ ನಾಯ್ಕ (29) ಸೆ. 12ರಿಂದ ನಾಪತ್ತೆಯಾಗಿದ್ದಾರೆ.

170 ಸೆಂ.ಮೀ. ಎತ್ತರವಿದ್ದು, ಹಿಂದಿ ಹಾಗೂ ಒಡಿಶಾ ಭಾಷೆ ಮಾತನಾಡುತ್ತಾರೆ. ಮಾಹಿತಿ ದೊರೆತಲ್ಲಿ ಉಡುಪಿ ನಗರ ಪೊಲೀಸ್‌ ಠಾಣಾಧಿಕಾರಿ ಸಂಪರ್ಕಿಸಲು ಪ್ರಕಟನೆ ತಿಳಿಸಿದೆ.

ಮಹಿಳೆ ನಾಪತ್ತೆ
ಉಡುಪಿ: ಮೂಲತಃ ದಾವಣಗೆರೆ ಜಿಲ್ಲೆ ಹರಿಹರ ನಿವಾಸಿ, ಪ್ರಸ್ತುತ ಉಡುಪಿ ತಾಲೂಕು ಪುತ್ತೂರು ಗ್ರಾಮದ ಕೊಡಂಕೂರು ಒಂದನೇ ಕ್ರಾಸ್‌ನ ನ್ಯೂ ಕಾಲನಿ ಬಾಡಿಗೆ ಮನೆಯೊಂದರಲ್ಲಿ ವಾಸವಿದ್ದ ಅಂಜುಬಾನು (28) ಆ. 23 ರಂದು ಮನೆಯಿಂದ ಹೊರ ಹೋದವರು ವಾಪಸು ಬಾರದೆ ನಾಪತ್ತೆಯಾಗಿದ್ದಾರೆ. 5 ಅಡಿ 3 ಇಂಚು ಎತ್ತರ ಇದ್ದಾರೆ. ಕನ್ನಡ, ಹಿಂದಿ ಹಾಗೂ ಉರ್ದು ಭಾಷೆ ಮಾತನಾಡುತ್ತಾರೆ.

Advertisement

ಆಸ್ಪತ್ರೆಯಿಂದ ವ್ಯಕ್ತಿ ನಾಪತ್ತೆ
ಮಂಗಳೂರು:
ವೆನ್ಲಾಕ್‌ ಆಸ್ಪತ್ರೆಗೆ ದಾಖಲಾಗಿದ್ದ ಉಪೇಂದ್ರ ಆಚಾರ್ಯ(65) ಅವರು ನಾಪತ್ತೆಯಾಗಿದ್ದಾರೆ.

ಹೃದಯದ ಕಾಯಿಲೆಯ ಹಿನ್ನೆಲೆಯಲ್ಲಿ ಸೆ.19ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಸೆ.21ರಂದು ಮುಂಜಾವ 3.30ಕ್ಕೆ ಯಾರಿಗೂ ಹೇಳದೆ ಆಸ್ಪತ್ರೆಯಿಂದ ಕಾಣೆಯಾಗಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಲಾಗಿದೆ.

4.5 ಅಡಿ ಎತ್ತರ, ಕಪ್ಪು ಮೈಬಣ್ಣ, ಬಿಳಿ ತಲೆಕೂದಲು, ಬಿಳಿ ಗಡ್ಡ, ಸಪೂರ ಶರೀರ, ದುಂಡು ಮುಖ ಹೊಂದಿದ್ದಾರೆ. ಕನ್ನಡ, ತುಳು ಭಾಷೆಗಳನ್ನು ಮಾತನಾಡುತ್ತಾರೆ. ಪಿಂಕ್‌ ಬಣ್ಣದ ಅಂಗಿ ಮತ್ತು ಕೇಸರಿ ಬಣ್ಣದ ಪಂಚೆ ಧರಿಸಿದ್ದರು. ಮಾಹಿತಿ ದೊರೆತವರು ದಕ್ಷಿಣ ಪೊಲೀಸ್‌ ಠಾಣೆ(0824-2220800) ಸಂಪರ್ಕಿಸುವಂತೆ ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next