Advertisement

Udupi ಚೆಕ್‌ ಅಮಾನ್ಯ: ಆರೋಪಿಗೆ ಜೈಲು, ದಂಡ

11:25 PM Feb 05, 2024 | Team Udayavani |

ಉಡುಪಿ: ಕೊಡವೂರಿನ ಸದಾನಂದ ನಾಯಕ್‌ ಅವರಿಂದ ಪಡೆದ ಸಾಲದ ಮೊತ್ತಕ್ಕೆ ಉಡುಪಿಯ ವಾದಿರಾಜ ರಸ್ತೆಯ ಜಯಶ್ರೀ ಶೇಟ್‌ ಚೆಕ್‌ ನೀಡಿದ್ದು, ಬ್ಯಾಂಕ್‌ನಲ್ಲಿ ಅಮಾನ್ಯಗೊಂಡಿತ್ತು. ವಿಚಾರಣೆ ನಡೆಸಿದ ಉಡುಪಿಯ 3ನೇ ಹೆಚ್ಚುವರಿ ಸಿವಿಲ್‌ ಜಡ್ಜ್ ಹಾಗೂ ಜೆಎಂಎಫ್ಸಿ ನ್ಯಾಯಾಧೀಶರಾದ ವಿನಾಯಕ ವಾಂಖಂಡೆ ಅವರು ಆರೋಪಿ ಜಯಶ್ರೀ ಅವರಿಗೆ 5 ಸಾವಿರ ರೂ. ದಂಡ ವಿಧಿಸಿದ್ದಾರೆ.

Advertisement

ಸಾಲ ಪಾವತಿಯ 10,45,000 ರೂ. ಮೊತ್ತದೊಂ ದಿಗೆ 5 ಸಾವಿರ ರೂ. ಸೇರಿಸಿ ಪಾವತಿಸಬೇಕು. ದಂಡ ಪಾವತಿಸಲು ತಪ್ಪಿದಲ್ಲಿ 4 ತಿಂಗಳು ಜೈಲು ಶಿಕ್ಷೆ ವಿಧಿಸಿ ಆದೇಶ ನೀಡಿದ್ದಾರೆ. ಸದಾನಂದ ನಾಯಕ್‌ ಪರವಾಗಿ ನ್ಯಾಯವಾದಿ ಬಿ. ಗಿರೀಶ್‌ ಐತಾಳ್‌ ವಾದ ಮಂಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next