Advertisement

ಮಹಿಳಾ ಕಾಂಗ್ರೆಸ್‌: ಆಟಿಡೊಂಜಿ ದಿನ

07:20 AM Jul 27, 2017 | Team Udayavani |

ಉಡುಪಿ: ಉಡುಪಿ ಬ್ಲಾಕ್‌ ಮಹಿಳಾ ಕಾಂಗ್ರೆಸ್‌ ಹಾಗೂ ಜಿಲ್ಲಾ ಮಹಿಳಾ ಕಾಂಗ್ರೆಸ್‌ ವತಿಯಿಂದ ಆಟಿಡೊಂಜಿ ದಿನ ಕಾರ್ಯಕ್ರಮವು ಬ್ರಹ್ಮಗಿರಿಯಲ್ಲಿರುವ ಜಿಲ್ಲಾ ಕಾಂಗ್ರೆಸ್‌ ಭವನದಲ್ಲಿ ಬುಧವಾರ ನಡೆಯಿತು.

Advertisement

ಸಚಿವ ಪ್ರಮೋದ್‌ ಮಧ್ವರಾಜ್‌ ಅವರು ಕಾರ್ಯಕ್ರಮ ಉದ್ಘಾಟಿಸಿ, ಮಹಿಳೆಯರು ಕುಟುಂಬವನ್ನು ಶಾಂತಿಯಿಂದ ನಡೆಸುವುದರೊಂದಿಗೆ ಉತ್ತಮ ಸಮಾಜವನ್ನು ಕಟ್ಟುವ ಕೆಲಸ ಮಾಡುತ್ತಿರುವುದು ಸಂತೋಷ ಎಂದರು.

ಕಾಪು ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷೆ ಗೀತಾ ವಾಗೆÛ ಆಟಿಯ ವಿಶೇಷತೆ ಬಗ್ಗೆ ಮಾಹಿತಿ ನೀಡಿದರು. ವೆರೋನಿಕಾ ಕರ್ನೇಲಿಯೋ ಅವರು ಆಟಿಡೊಂಜಿ ದಿನ ಕಾರ್ಯಕ್ರಮಗಳಿಂದಾಗಿ ಮಹಿಳೆಯರು ಸಂಘಟಿತರಾಗುತ್ತಿದ್ದಾರೆ ಎಂದರು.

ನಗರಸಭೆ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ, ಬ್ಲಾಕ್‌ ಅಧ್ಯಕ್ಷರಾದ ಸಂಧ್ಯಾ ಶೆಟ್ಟಿ, ಮಮತಾ ಶೆಟ್ಟಿ, ಗೋಪಿ ನಾಯ್ಕ, ಜ್ಯೋತಿ ಪುತ್ರನ್‌, ಸುಜಾತಾ ಆಚಾರ್ಯ, ಗೌರಿ ದೇವಾಡಿಗ, ಮಲ್ಲಿಕಾ ಪೂಜಾರಿ,ಸುನೀತಾ ಶೆಟ್ಟಿ, ಜಾನಕಿ ನಾಯ್ಕ, ಜಯಶ್ರೀ ಕೃಷ್ಣರಾಜ್‌, ಪದ್ಮಾವತಿ, ರೋಶನಿ ಒಲಿವೆರಾ, ಕಾಂಗ್ರೆಸ್‌ ಮುಖಂಡರಾದ ಗಣೇಶ್‌ ನೆರ್ಗಿ, ರಮೇಶ್‌ ಕಾಂಚನ್‌, ಸತೀಶ್‌ ಅಮೀನ್‌ ಪಡುಕೆರೆ, ಹರೀಶ್‌ ಕಿಣಿ, ದಿವಾಕರ ಕುಂದರ್‌, ಪ್ರಶಾಂತ್‌ ಪೂಜಾರಿ ಉಪಸ್ಥಿತರಿದ್ದರು.

ಉಡುಪಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷೆ ಚಂದ್ರಿಕಾ ಶೆಟ್ಟಿ ಸ್ವಾಗತಿಸಿದರು. ಜ್ಯೋತಿ ಹೆಬ್ಟಾರ್‌ ಕಾರ್ಯಕ್ರಮ ನಿರೂಪಿಸಿದರು. ಸೆಲಿನಾ ಕರ್ಕಡ ವಂದಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next