Advertisement

Udupi: ಅನಾಥ ಸ್ಥಿತಿಯಲ್ಲಿದೆ ಬೀಡಿನಗುಡ್ಡೆಯ ಅನಿಲ ಚಿತಾಗಾರ!

06:27 PM Sep 01, 2024 | Team Udayavani |

ಉಡುಪಿ: ನಗರದ ಬೀಡಿನಗುಡ್ಡೆಯ ಹಿಂದೂ ರುದ್ರಭೂಮಿ ಬಳಿ ನಗರಸಭೆ ಒಂದು ಕೋ.ರೂ. ಗೂ ಅಧಿಕ ವೆಚ್ಚದಲ್ಲಿ ನಿರ್ಮಿಸಿರುವ ಪರಿಸರ ಸ್ನೇಹಿ ಅನಿಲ ಚಿತಾಗಾರಕ್ಕೆ ವರ್ಷ ಕಳೆದರೂ ಉದ್ಘಾಟನೆ ಭಾಗ್ಯ ಸಿಕ್ಕಿಲ್ಲ.

Advertisement

ಈಗಲೂ ಕೂಡ ಬೀಡಿನಗುಡ್ಡೆಯ ಹಿಂದೂ ರುದ್ರಭೂಮಿಯಲ್ಲಿ ಕಟ್ಟಿಗೆಗಳನ್ನು ಬಳಸಿಕೊಂಡು ಸಾಂಪ್ರದಾಯಿಕ ಪದ್ಧತಿಯಂತೆ ಅಂತ್ಯಸಂಸ್ಕಾರಗಳನ್ನು ನಡೆಸಲಾಗುತ್ತಿದೆ.

ಮರಗಳ ವಿನಾಶ ಹಾಗೂ ಶವ ದಹನದಿಂದಾಗುವ ಧೂಮ, ಹಾರುವ ಬೂದಿಯಿಂದ ಪರಿಸರವು ವಾಯುಮಾಲಿನ್ಯ ಪಡೆಯುತ್ತದೆ. ಪರಿಸರ ರಕ್ಷಿಸುವ ದೃಷ್ಟಿಕೋನದಿಂದ ನಗರಸಭೆ ಶವಸಂಸ್ಕಾರಕ್ಕೆ ಆಧುನಿಕ ತಂತ್ರಜ್ಞಾನದ ಅನಿಲ ಚಿತಾ ಗಾರವನ್ನು ಬೀಡಿನಗುಡ್ಡೆಯ ಹಿಂದೂ ರುದ್ರಭೂಮಿಯಲ್ಲಿರುವ ಸಾಂಪ್ರದಾಯಿಕ ಚಿತಾಗಾರದ ಸನಿಹ ಸ್ಥಾಪಿಸಿತ್ತು. ಈ ಪರಿಸರ ಸ್ನೇಹಿ ಯೋಜನೆಗೆ ಸಾರ್ವಜನಿಕ ವಲಯದಲ್ಲಿ ಬಹಳ ಮೆಚ್ಚುಗೆ ವ್ಯಕ್ತವಾಗಿತ್ತು. ಆದರೆ ವರ್ಷ ಕಳೆದರೂ ಇದು ಕಾರ್ಯರೂಪಕ್ಕೆ ಬಾರದಿರುವ ಕಾರಣ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ನವೀನ ವ್ಯವಸ್ಥೆ
ಕಟ್ಟಿಗೆಯಿಂದ ಶವ ದಹಿಸಲು ಸುಮಾರು 2ರಿಂದ 3 ಗಂಟೆಗಳು ಬೇಕಾಗುತ್ತದೆ. ಆದರೆ ಅನಿಲ ಚಿತಾಗಾರದಲ್ಲಿ ಬಹಳ ಕಡಿಮೆ ಸಮಯದಲ್ಲಿ ಕಳೇಬರವನ್ನು ಭಸ್ಮಗೊಳಿಸಬಹುದು. ಅನಿಲ ಚಿತಾಗಾರದಲ್ಲಿ ಶವವನ್ನು ದಹಿಸುವಾಗ ಉತ್ಪತ್ತಿಯಾಗುವ ಧೂಮವು ನೇರವಾಗಿ ಪ್ರಸ್ತುತ ಶವ ಸಂಸ್ಕಾರಕ್ಕೆ ತಗಲುವ ವೆಚ್ಚ 2,000 ರೂ. ಅನಿಲ ಚಿತಾಗಾರದಲ್ಲಿ ಶವಸಂಸ್ಕಾರ ವೆಚ್ಚ 5ರಿಂದ 6 ಸಾವಿರ ರೂ. ಚೇಂಬರ್‌ಗಳ ಸಂಖ್ಯೆ 6 ದಿನನಿತ್ಯ ಸುಡುವ ಸರಾಸರಿ ಹೆಣಗಳು 6ರಿಂದ 10 ವರ್ಷ ಕಳೆದರೂ ದೊರಕದ ಉದ್ಘಾ ಟನೆ ಭಾಗ್ಯ ಸುದಿನ ಜನಹಿತ ಪರಿಸರದಲ್ಲಿ ಪಸರಿಸುವುದಿಲ್ಲ. ಈ ಚಿತಾಗಾರವು ಧೂಮದಲ್ಲಿನ ರಾಸಾಯನಿಕ ಹಾಗೂ ಧೂಮವನ್ನು ನಿಯಂತ್ರಿಸಿಕೊಂಡು, ಶುದ್ಧೀಕರಿಸಿದ ಧೂಮವನ್ನು ಚಿಮಣಿಯ ಮೂಲಕ ಹೊರಹಾಕಿಸುವ ನವೀನ ವ್ಯವಸ್ಥೆ ಹೊಂದಿದೆ. ಪರಿಸರ ಸ್ನೇಹಿಯಾಗಿ ಅನಿಲ ಚಿತಾಗಾರವು ಕೆಲಸ ನಿರ್ವಹಿಸುತ್ತದೆ.

ಕಟ್ಟಿಗೆ ದಾಸ್ತಾನು
ಸರಕಾರದ ಜಾಗವಾದ ಇದು ಪ್ರಸ್ತುತ ಹಿಂದೂ ಶವ ಸಂಸ್ಕಾರ ಸೇವಾ ಸಮಿತಿಯ ಸ್ವಾಧೀನದಲ್ಲಿದೆ. ಸುಮಾರು 50 ವರ್ಷಗಳಿಂದಲೂ ಇದು ಕಾರ್ಯಾಚರಿಸುತ್ತಿದ್ದು, ನಗರಸಭೆ ಅಥವಾ ಜಿಲ್ಲಾಡಳಿತ ಇದಕ್ಕೆ ಕಿಂಚಿತ್‌ ನೆರವು ನೀಡಿಲ್ಲ. 1 ವರ್ಷಕ್ಕೆ ಬೇಕಿರುವಷ್ಟು ಕಟ್ಟಿಗೆಗಳನ್ನು ದಾಸ್ತಾನು ಇರಿಸಲಾಗಿದೆ. ಬಿದ್ದ ಮರಗಳನ್ನು ಮಾತ್ರ ಇದಕ್ಕೆ ಬಳಕೆ ಮಾಡಲಾಗುತ್ತಿದೆ. ಇದಕ್ಕೆಂದು ಮರಗಳನ್ನು ಕಡಿಯುವ ಕ್ರಮ ಇಲ್ಲ ಎನ್ನುತ್ತಾರೆ ಇಲ್ಲಿನ ಸಿಬಂದಿ.

Advertisement

ಸೂಕ್ತ ಕ್ರಮಕೈಗೊಳ್ಳಲಾಗುವುದು
ಬೀಡಿನಗುಡ್ಡೆಯ ಹಿಂದೂ ರುದ್ರಭೂಮಿಯಲ್ಲಿರುವ ಅನಿಲ ಚಿತಾಗಾರದ ಸಾಧಕ-ಬಾಧಕಗಳ ಬಗ್ಗೆ ತಿಳಿದುಕೊಂಡು ಇದಕ್ಕೆ ಸೂಕ್ತ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಶೀಘ್ರ ಕ್ರಮ ತೆಗೆದುಕೊಳ್ಳಲಾಗುವುದು.
-ಪ್ರಭಾಕರ ಪೂಜಾರಿ ಗುಂಡಿಬೈಲು, ಅಧ್ಯಕ್ಷರು, ನಗರಸಭೆ

ದುಬಾರಿ ವೆಚ್ಚ
ಸಾಮಾನ್ಯ ಅಂತ್ಯಸಂಸ್ಕಾರಕ್ಕೆ ತಗಲುವ ವೆಚ್ಚಕ್ಕಿಂತ ಅನಿಲ ಚಿತಾಗಾರಕ್ಕೆ ತಗಲುವ ವೆಚ್ಚ ದುಬಾರಿಯಾಗಿದೆ. ಕೋಟ್ಯಂತರ ರೂ.ವೆಚ್ಚದ ಈ ಚಿತಾಗಾರದ ಗ್ಯಾಸ್‌ ಚೇಂಬರ್‌ಗೆ 26 ಲ.ರೂ. ವಿನಿಯೋಗ ಮಾಡಲಾಗಿದ್ದು, ಪ್ರಸ್ತುತ ಅದು ಕೂಡ ಸೋರುತ್ತಿದೆ. ಒಂದು ಕಳೇಬರ ಸುಡಲು 2.5ರಷ್ಟು ಗ್ಯಾಸ್‌ ಸಿಲಿಂಡರ್‌ ಆವಶ್ಯಕತೆಯೂ ಇದಕ್ಕಿದೆ. ಈಗಾಗಲೇ ಇದಕ್ಕೆ 3 ಫೇಸ್‌ ವಿದ್ಯುತ್‌ ಕೂಡ ಬೇಕು ಎನ್ನಲಾಗುತ್ತಿದ್ದು, ಒಟ್ಟಾರೆಯಾಗಿ ಇದು ಬಲು ದುಬಾರಿಯಾಗಿ ಪರಿಣಮಿಸಿದೆ. ಜತೆಗೆ ಇದರ ನಿರ್ವಹಣೆಯ ವೆಚ್ಚವೂ ಪ್ರತ್ಯೇಕವಾಗಿರುವ ಕಾರಣ ಈ ಯಂತ್ರವೂ ಈಗ ಹೆಣದಂತೆಯೇ ಮಲಗಿಕೊಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next