Advertisement

ಉಡುಪಿ ನೂತನ ಎಸ್‌ಪಿಯಾಗಿ ಡಾ|ಸಂಜೀವ ಪಾಟೀಲ್‌

10:43 AM Aug 05, 2017 | Team Udayavani |

ಉಡುಪಿ: ಕಳೆದೊಂದು ವರ್ಷದಿಂದ ಉಡುಪಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಕೆ.ಟಿ. ಬಾಲಕೃಷ್ಣ ಅವರನ್ನು ವರ್ಗಾಯಿಸಲಾಗಿದ್ದು, ಉಡುಪಿಗೆ ಡಾ| ಸಂಜೀವ ಎಂ. ಪಾಟೀಲ್‌ ಅವರನ್ನು ಎಸ್‌ಪಿಯಾಗಿ ವರ್ಗಾ ವಣೆ ಮಾಡಲಾಗಿದೆ.

Advertisement

ಡಾ| ಸಂಜೀವ ಪಾಟೀಲ್‌ ಅವರು ಬೆಂಗಳೂರು ಭ್ರಷ್ಟಾಚಾರ ನಿಗ್ರಹ ದಳ ಕೇಂದ್ರ ಕಚೇರಿಯಲ್ಲಿ ಎಸ್‌ಪಿಯಾಗಿದ್ದರು. ಅದಕ್ಕೂ ಮುನ್ನ ಮಂಗಳೂರು ಕಮಿಷನರೇಟ್‌ ವ್ಯಾಪ್ತಿಯ ಡಿಸಿಪಿಯಾಗಿ ಕರ್ತವ್ಯ ನಿರ್ವಹಿಸಿದ್ದರು. ಉತ್ತಮ ಸೇವೆಗಾಗಿ ಅವರು 2013ರಲ್ಲಿ ಮುಖ್ಯಮಂತ್ರಿ ಚಿನ್ನದ ಪದಕ ಪಡೆದಿದ್ದರು. ಕೆಲ ದಿನಗಳ ಹಿಂದೆಯಷ್ಟೇ ರಾಜ್ಯ ಸರಕಾರವು 23 ಮಂದಿ ಕೆಪಿಎಸ್‌ಸಿ ಗ್ರೇಡ್‌ನ‌ಲ್ಲಿದ್ದವರನ್ನು ಐಪಿಎಸ್‌ ಆಗಿ ಪದೋನ್ನತಿ ನೀಡಿತ್ತು. ಅದರಲ್ಲಿ ಸಂಜೀವ ಪಾಟೀಲ್‌ ಅವರೂ ಇದ್ದರು.

ಕೆ.ಟಿ. ಬಾಲಕೃಷ್ಣ 2016ರ ಜುಲೈ ಅಂತ್ಯದಲ್ಲಿ ಗದಗ ಜಿಲ್ಲೆಯಿಂದ ಉಡುಪಿಗೆ ವರ್ಗವಾಗಿದ್ದರು. ಕಳೆದ ವರ್ಷ ಆ. 11ರಂದು ಉಡುಪಿ ಜಿಲ್ಲಾ ಎಸ್‌ಪಿಯಾಗಿ ಅವರು ಅಧಿಕಾರ ಸ್ವೀಕರಿಸಿಕೊಂಡಿದ್ದರು. ಪ್ರಸ್ತುತ ಎಸ್‌ಪಿ ಮತ್ತು ಡೆಪ್ಯೂಟಿ ಕಮಾಂಡೆಂಟ್‌ ಜನರಲ್‌, ಹೋಮ್‌ ಗಾರ್ಡ್‌ ಬೆಂಗಳೂರು ಇಲ್ಲಿಗೆ ಬಾಲಕೃಷ್ಣ ಅವರು ವರ್ಗಾವಣೆಯಾಗಿದ್ದಾರೆ. ರಿಲೀವ್‌ಗೆ ಮೂವ್‌ಮೆಂಟ್‌ ಆರ್ಡರ್‌ ಆದ ಬಳಿಕ ನೂತನ ಎಸ್‌ಪಿಯವರು ಅಧಿಕಾರ ಸ್ವೀಕರಿಸಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next