Advertisement

Udupi: ಮದ್ಯದ ಚಟ; ವ್ಯಕ್ತಿ ಆತ್ಮಹ*ತ್ಯೆ

07:47 PM Oct 13, 2024 | Team Udayavani |

ಉಡುಪಿ: ಮದ್ಯದ ಚಟ ಹೊಂದಿದ್ದ ಉಡುಪಿ ಪುತ್ತೂರು ನಿವಾಸಿ ಗುರುದೇವ್‌(42) ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

Advertisement

ಅ.11ರಂದು ಮದ್ಯ ಸೇವಿಸಲು ತಾಯಿ ಹಣ ನೀಡಿಲ್ಲ ಎಂಬ ಕೋಪದಿಂದ ಮನೆಯಲ್ಲಿದ್ದ ಟಿವಿ, ವಾಷಿಂಗ್‌ ಮೆಷಿನ್‌, ಅಕ್ವಗಾರ್ಡ್‌ ಮುಂತಾದವುಗಳನ್ನು ಒಡೆದಿದ್ದರು. ಇದರಿಂದ ಭಯಗೊಂಡ ಅವರ ತಾಯಿ ಸಂಜೆ 6 ಗಂಟೆಗೆ ಕೆಮ್ಮಣ್ಣಿನಲ್ಲಿರುವ ತನ್ನ ಅಕ್ಕನ ಮನೆಗೆ ಹೋಗಿದ್ದರು. ಅ.12ರಂದು ರಾತ್ರಿ 9 ಗಂಟೆಗೆ ಮನೆಗೆ ಮರಳಿದಾಗ ಗುರುದೇವ್‌ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡು ಬಂದಿದೆ. ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next