Advertisement

Kaikamba: ಹಠಾತ್ ಕುಸಿದು ಬಿದ್ದು ವ್ಯಕ್ತಿ ಸಾವು

07:53 PM Oct 13, 2024 | Team Udayavani |

ಕೈಕಂಬ: ಕುಪ್ಪೆಪದವಿನ ಫಾಸ್ಟ್‌ಫುಡ್‌ ಸೆಂಟರ್‌ನಲ್ಲಿ ಕೆಲಸ ಮಾಡುತ್ತಿದ್ದ ಅಶೋಕ್‌ (33) ಎಂಬವರು ಹೃದಯಾಘಾತದಿಂದಾಗಿ ಹಠಾತ್‌ ಕುಸಿದು ಬಿದ್ದು ಮೃತಪಟ್ಟ ಘಟನೆ ಶನಿವಾರ ಸಂಭವಿಸಿದೆ.

Advertisement

ಪುತ್ತೂರು ತಾಲೂಕಿನ ಕರಾಯ ಮರಿಪಾಡಿ ನಿವಾಸಿ ಅಶೋಕ್‌ ಅವರು ಸಹೋದರ ಸಂಬಂಧಿ ಗಿರೀಶ್‌ ಎಂಬವರು ಕುಪ್ಪೆಪದವಿನಲ್ಲಿ ನಡೆಸುತ್ತಿರುವ ಫಾಸ್ಟ್‌ಫುಡ್‌ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರು. ಶನಿವಾರ ಬೆಳಗ್ಗೆ ಎಂದಿನಂತೆ ಕೆಲಸ ಮಾಡುತ್ತಿದ್ದಾಗ ಎದೆ ನೋವು ಕಾಣಿಸಿಕೊಂಡಿದ್ದರೂ ಅದನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ‌

ಮಧ್ಯಾಹ್ನ ವೇಳೆ ಹೊಟೇಲ್‌ನಲ್ಲಿ ಕುಸಿದು ಬಿದ್ದರು. ತತ್‌ಕ್ಷಣ ಸ್ಥಳೀಯ ಖಾಸಗಿ ಆಸ್ಪತ್ರೆಗೆ ಕೊಂಡೊಯ್ಯಲಾಗಿದ್ದು, ಅಲ್ಲಿನ ವೈದ್ಯರ ಸಲಹೆಯಂತೆ ಅವರನ್ನು ಮೂಡುಬಿದಿರೆಯ ಖಾಸಗಿ ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಆದರೆ ದಾರಿ ಮಧ್ಯೆ ಅವರು ಕೊನೆಯುಸಿರೆಳೆದರು. ಮೃತರು ಪತ್ನಿ ಮತ್ತು ಒಂದು ವರ್ಷದ ಮಗುವನ್ನು ಅಗಲಿದ್ದಾರೆ.

ಬಜಪೆ ಪೊಲೀಸ್‌ ಠಾಣೆಯಲ್ಲಿ ಅಸ್ವಾಭಾವಿಕ ಸಾವು ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next