Advertisement

Udupi; ನೇಣು ಬಿಗಿದು ಯುವಕ ಆತ್ಮಹತ್ಯೆ

11:51 PM Feb 19, 2024 | Team Udayavani |

ಉಡುಪಿ: ಯುವಕ ನೋರ್ವ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಣಿಪಾಲ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

Advertisement

ಯುವಕನ ಹೆಸರನ್ನು ಸೂರಜ್‌ (22) ಎಂದು ಗುರುತಿಸಲಾಗಿದೆ. ಅವರು ಫೆ. 17ರಂದು ರಾತ್ರಿ ತಮ್ಮ ಚಿಕ್ಕಮ್ಮನೊಂದಿಗೆ ಮಾತನಾಡಿ ನಿದ್ರೆ ಮಾಡುವುದಾಗಿ ಹೇಳಿ ಕೊಠಡಿಗೆ ಹೋಗಿದ್ದರು. ಮರುದಿನ ಬೆಳಗ್ಗೆ ಸೂರಜ್‌ ಅವರನ್ನು ಎಬ್ಬಿಸಲು ಚಿಕ್ಕಮ್ಮಹೋದಾಗ ರೂಮಿನಲ್ಲಿ ಆತ ಇಲ್ಲ ದಿರುವುದನ್ನು ಗಮನಿಸಿ ಮನೆಯ ಮೇಲೆ ಬಂದು ನೋಡಿದಾಗ ಸಮೀಪದ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡು ಬಂದಿತು.

ಮಣಿಪಾಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next