Advertisement

Udupi ಮನೆಯೊಳಗೆ ನುಗ್ಗಿ ದಾಂಧಲೆ: ವಶಕ್ಕೆ

12:13 AM Jul 15, 2024 | Team Udayavani |

ಉಡುಪಿ: ಕಿದಿಯೂರು ಗ್ರಾಮದ ಕಪ್ಪೆಟ್ಟುವಿನಲ್ಲಿ ಎರಡು ಮನೆಗಳಿಗೆ ರಾತ್ರಿ ಹೊತ್ತಿನಲ್ಲಿ ಆಗಂತುಕನೊಬ್ಬ ಒಳನುಗ್ಗಿ ದಾಂಧಲೆ ನಡೆಸಿದ ಘಟನೆ ನಡೆದಿದೆ.

Advertisement

ಭೀತಿಗೊಳಗಾದ ಮನೆಯವರು ಪೊಲೀಸರಿಗೆ ದೂರು ನೀಡಿದ್ದು ತತ್‌ಕ್ಷಣ ಸ್ಥಳಕ್ಕೆ ತೆರಳಿದ ಪೊಲೀಸರು ಆತನನ್ನು ವಶಕ್ಕೆ ಪಡೆದುಕೊಂಡರು.

ವ್ಯಕ್ತಿ ಮಾನಸಿಕ ರೋಗಿಯೆಂದು ತಿಳಿದುಬಂದಿದೆ. ನಗರ ಪೊಲೀಸ್‌ ಠಾಣೆಯ ತನಿಖಾ ಸಹಾಯಕ ರಿಯಾಜ್‌ ಅವರು ಸಮಾಜಸೇವಕ ನಿತ್ಯಾನಂದ ಒಳಕಾಡು ಅವರ ನೆರವು ಪಡೆದು ದೊಡ್ಡಣಗುಡ್ಡೆಯ ಡಾ| ಎ.ವಿ. ಬಾಳಿಗ ಆಸ್ಪತ್ರೆಗೆ ದಾಖಲಿಸಿದರು.

ದಾಖಲಿಸಲ್ಪಟ್ಟ ವ್ಯಕ್ತಿಯನ್ನು ರಾಜಗಢದ ಸುನೀಲ್‌ ವರ್ಮ ಎಂದು ಗುರುತಿಸಲಾಗಿದೆ. ವಾರಸುದಾರರು ನಗರ ಪೊಲೀಸ್‌ ಠಾಣೆಯನ್ನು ಸಂಪರ್ಕಿಸಬಹುದು.

 

Advertisement
Advertisement

Udayavani is now on Telegram. Click here to join our channel and stay updated with the latest news.

Next