Advertisement

Udupi ವಿದ್ಯುತ್‌ ಆಘಾತದಿಂದ ಗಾಯಗೊಂಡಿದ್ದ ಎಲೆಕ್ಟ್ರಿಷಿಯನ್ ಸಾವು

12:52 AM Jul 20, 2024 | Team Udayavani |

ಉಡುಪಿ: ಮೂನಿಡಂಬೂರು ಗ್ರಾಮದ ಎಲೆಕ್ಟ್ರಿಶಿಯನ್‌ ವೃತ್ತಿ ಮಾಡಿಕೊಂಡಿದ್ದ ಗಣೇಶ್‌ ಭಂಡಾರಿ (58) ಅವರು ಮನೆಯ ಹತ್ತಿರದ ಪಿ. ಎಲ್‌. ರಾವ್‌ ಅವರ ಮನೆಯ ಹಿಂಬದಿ ಜು.10ರಂದು ಬೆಳಗ್ಗೆ ಎಲೆಕ್ಟ್ರಿಶಿಯನ್‌ ಕೆಲಸ ಮಾಡುತ್ತಿದ್ದಾಗ ವಿದ್ಯುತ್‌ ಆಘಾತಕ್ಕೆ ಒಳಗಾಗಿ ಬಿದ್ದಿದ್ದು, ಕುತ್ತಿಗೆಯು ಸಿಮೆಂಟ್‌ ಕಟ್ಟೆಗೆ ತಾಗಿ ತೀವ್ರ ಅಸ್ವಸ್ಥರಾಗಿದ್ದರು.

Advertisement

ಅವರನ್ನು ಖಾಸಗಿ ಆಸ್ಪತ್ರೆಗೆ ಚಿಕಿತ್ಸಗೆ ದಾಖಲಿಸಲಾಗಿತ್ತು. ಆರ್ಥಿಕ ಸಮಸ್ಯೆಯಿಂದ ಬಳಲುತ್ತಿದ್ದ ಕುಟುಂಬವು ಗಣೇಶ್‌ ಅವರನ್ನುಅನಂತರ ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದರು.

ಜು.18ರಂದು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ. ಉಡುಪಿ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next