Advertisement

Udupi ಆತಂಕ ಸೃಷ್ಟಿಸಿದ್ದ ಯುವಕನ ರಕ್ಷಣೆ

11:11 PM Jul 24, 2024 | Team Udayavani |

ಉಡುಪಿ: ಬನ್ನಂಜೆ ಕೆಎಸ್ಸಾರ್ಟಿಸಿ ಬಸ್‌ ನಿಲ್ದಾಣದಲ್ಲಿ ಖಿನ್ನತೆಗೊಳಗಾಗಿದ್ದ ನಂದ (18) ಅವರನ್ನು ಸಮಾಜಸೇವಕ ವಿಶು ಶೆಟ್ಟಿ ಅಂಬಲಪಾಡಿ ಅವರು ರಕ್ಷಿಸಿದ್ದಾರೆ.

Advertisement

ತಾನು ಯುಟ್ಯೂಬ್‌ ಬ್ಲಾಗರ್‌ ಎಂದು ಮೊಬೈಲ್‌ನಲ್ಲಿ ಚಿತ್ರೀಕರಣ ಹಾಗೂ ರೀಲ್ಸ್‌ ಮಾಡಿ ಆತ ಆತಂಕ ಸೃಷ್ಟಿಸಿದ್ದ. ಸಾರ್ವಜನಿಕರಿಂದ ಏಟು ಕೂಡ ತಿಂದಿದ್ದಾನೆ ಎನ್ನಲಾಗಿದೆ. ಬಸ್‌ ನಿಲ್ದಾಣದಲ್ಲಿದ್ದ ಭದ್ರತ ಸಿಬಂದಿ ಹಾಗೂ ಪೊಲೀಸರು ರಕ್ಷಣ ಕಾರ್ಯಕ್ಕೆ ಸಹಕರಿಸಿದರು.

ಮಹಿಳೆಯ ರಕ್ಷಣೆ
ಉಡುಪಿ: ಪತಿಯನ್ನು ಕಳೆದು ಕೊಂಡು ಮಾನಸಿಕ ಅಸ್ವಸ್ಥಳಾಗಿ ಬೀದಿ ಪಾಲಾಗಿದ್ದ ಕೇರಳದ ಸುಜಾತಾ ಮೇರಿ (40) ಅವರನ್ನು ಮಾನಸಿಕ ಅಸ್ವಸ್ಥರ ಪುನರ್ವಸತಿ ಕೇಂದ್ರದಿಂದ ಮಂಜೇಶ್ವರದ ಸ್ನೇಹಾಲಯಕ್ಕೆ ದಾಖ ಲಿಸಲಾಗಿದೆ. ಅವರು ಬ್ರಹ್ಮಾವರದ ವ್ಯಕ್ತಿಯೊಬ್ಬರನ್ನು ವಿವಾಹವಾಗಿದ್ದು, ಅವರು ಈಗಾಗಲೇ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.

 

 

Advertisement
Advertisement

Udayavani is now on Telegram. Click here to join our channel and stay updated with the latest news.

Next