Advertisement

ಉಡುಪಿ: ಬಸ್‌ ಢಿಕ್ಕಿಯಾಗಿ ಮಹಿಳೆ ಸಾವು

08:56 PM Sep 07, 2022 | Team Udayavani |

ಉಡುಪಿ:  ಪುತ್ತೂರು ಗ್ರಾಮದ ಅಂಬಾಗಿಲಿನಲ್ಲಿರುವ ಅಮೃತ್‌ಗಾರ್ಡನ್‌ ಮುಂಭಾಗ ರಾಷ್ಟ್ರೀಯ ಹೆದ್ದಾರಿ  66ನ ರಸ್ತೆ ದಾಟುವ ವೇಳೆ ಬಸ್‌ ಢಿಕ್ಕಿ ಹೊಡೆದು ಮಹಿಳೆ ಮೃತಪಟ್ಟ ಘಟನೆ ಬುಧವಾರ ಸಂಭವಿಸಿದೆ.

Advertisement

ಹೆಬ್ರಿ, ಚಾರಾ ಗ್ರಾಮದ ನಿವಾಸಿ ವಸಂತಿ ಶೆಟ್ಟಿ (65) ಮೃತಪಟ್ಟವರು.

ಇದನ್ನೂ ಓದಿ:ಪಡುಬಿದ್ರಿ: ಪತ್ನಿಯಿಂದ ಸಾಲ ಮಾಡಿಸಿ ವಿಷವುಣಿಸಿದ ಪತಿ

ಅಮೃತ್‌ಗಾರ್ಡನ್‌ ವಿವಾಹ ಸಮಾರಂಭಕ್ಕೆ ಆಗಮಿಸಿದ್ದ ವಸಂತಿ ಅವರು ರಾ.ಹೆ. ದಾಟುತ್ತಿದ್ದಾಗ ರಸ್ತೆಯ ಮಧ್ಯದಲ್ಲಿರುವ ಡಿವೈಡರ್‌ ಬಳಿಗೆ ತಲುಪುವಷ್ಟರಲ್ಲಿ ಕುಂದಾಪುರ ಕಡೆಯಿಂದ ಉಡುಪಿಗೆ ವೇಗವಾಗಿ ಬರುತ್ತಿದ್ದ ಬಸ್‌ ಢಿಕ್ಕಿ ಹೊಡೆದಿದೆ. ಪರಿಣಾಮ ತಲೆ, ಕೈ ಮತ್ತು ಕಾಲಿಗೆ ಗಂಭೀರ ಗಾಯವಾಗಿದ್ದು, ತತ್‌ಕ್ಷಣ ಅವರನ್ನು ಹೈಟೆಕ್‌ ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲಿ ಮೃತಪಟ್ಟಿದ್ದಾರೆ.

ಘಟನೆ ಉಡುಪಿ ಸಂಚಾರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಪ್ರಕರಣ ದಾಖಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next