Advertisement
ನಿಂಗಪ್ಪ ಹಳಿಮನಿ (32) ಎಂಬ ಯುವ ರೈತನೇ ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ.
Related Articles
Advertisement
ಅಲ್ಲದೆ ಸರಕಾರದವರು ಸರ್ಕಾರಿ ನೌಕರರಿಗೆ ವೇತನ ಜಾಸ್ತಿ ಮಾಡ್ತಾ ಹೋಗ್ತಾರೆ. ರೈತರಿಗೆಲ್ಲಿ ಅವಕಾಶ. ಬೆಳೆದ ಫಸಲು ಬೆಲೆ ದೊರೆಯದ ಕಾರಣ ಮಾಡಿದ ಸಾಲವು ತೀರಿಸಲಾಗದೆ ಸಂಸಾರವು ನಡೆಸಲಾಗದ ಸ್ಥಿತಿಯಲ್ಲಿ ದಿಕ್ಕು ದೋಚದೆ ಹೆಂಡತಿ ಮಕ್ಕಳನ್ನು ಬೀದಿಗೆ ಬಿಟ್ಟು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಈಗ ಅದೇ ಸಾಲಿನಲ್ಲಿ ನಾನು ಸೇರುತ್ತಿದ್ದೇನೆ ಎಂದು ನಿಂಗಪ್ಪ ಬರೆದ ಪತ್ರದಲ್ಲಿ ವಿವರಿಸಿದ್ದಾನೆ.
ಸ್ಥಳೀಯ ಪೊಲೀಸರು ಸ್ಥಳಕ್ಕೆ ಧಾವಿಸಿ ಆತ್ಮಹತ್ಯೆ ಮಾಡಿಕೊಂಡ ಯುವಕ ನಿಂಗಪ್ಪನ ದೇಹವನ್ನು ನಗರದ ಸರ್ಕಾರಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ದಾಖಲಿಸಿದ್ದಾರೆ.
ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆಕೈಗೊಂಡಿದ್ದರು. ಈ ಪ್ರಕರಣ ಸಮಗ್ರ ಪರಿಶೀಲಿಸಿ ಆತ್ಮಹತ್ಯೆ ಗೆ ಕಾರಣೀಭೂತರಾದ ಆ ಫೈನಾನ್ಸರಿಗಳಿಗೆ ಕಾನೂನಿನಡಿ ಶಿಕ್ಷೆಗೊಳಪಡಿಸಬೇಕೆಂಬುದೇ ಮೃತ ನಿಂಗಪ್ಪ ಸ್ನೇಹಿತರ ಹಾಗೂ ಬಂಧುಗಳ ಒತ್ತಾಯವಾಗಿದೆ. ಸರ್ಕಾರಿ ಆಸ್ಪತ್ರೆ ಮುಂದೆ ಬಂಧುಗಳ ಆಕ್ರಂದನ ಮುಗಿಲು ಮುಟ್ಟಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆಕೈಗೊಂಡಿದ್ದು ಸತ್ಯಾಸತ್ಯತೆ ಪರಿಶೀಲಿಸಿ ತಪ್ಪಿತಸ್ಥರ ಮೇಲೆ ಕ್ರಮಕೈಗೊಳ್ಳಲಾಗುವದು ಎಂದು ತಿಳಿಸಿದ್ದಾರೆ.
ಇದನ್ನೂ ಓದಿ : ತಾಲಿಬಾನ್ ಹಿಂಸಾಚಾರ : ಭಾರತದಲ್ಲಿ ಡ್ರೈ ಫ್ರುಟ್ಸ್ ಗಳ ಬೆಲೆ ಶೇ.15-20 ರಷ್ಟು ಏರಿಕೆ..!