Advertisement

ಉದಯವಾಣಿ ಹನೂರು ವರದಿಗಾರ ವಿನೋದ್ ಅಪಘಾತದಲ್ಲಿ ವಿಧಿವಶ

09:58 PM Dec 18, 2023 | Team Udayavani |

ಮೈಸೂರು: ಸ್ಕೂಟರ್‌ಗೆ ಕಾರು ಢಿಕ್ಕಿ ಹೊಡೆದ ಪರಿಣಾಮ ಹನೂರು ತಾಲೂಕಿನ ಉದಯವಾಣಿ ವರದಿಗಾರ ವಿನೋದ್(38) ಮೃತಪಟ್ಟಿದ್ದಾರೆ.ತಿ.ನರಸೀಪುರ ರಸ್ತೆಯ ರಿಂಗ್ ರೋಡ್ ಜಂಕ್ಷನ್‌ನಲ್ಲಿ ಭಾನುವಾರ ರಾತ್ರಿ ಅಪಘಾತ ನಡೆದಿತ್ತು.

Advertisement

ವಿನೋದ್ ಅವರು ಭಾನುವಾರ ರಾತ್ರಿ 7.30ರ ವೇಳೆ ಸ್ಕೂಟರ್‌ನಲ್ಲಿ ರಿಂಗ್ ರಸ್ತೆಯಿಂದ ನಗರದ ಕಡೆ ತಿರುವು ಪಡೆಯುತ್ತಿದ್ದಾಗ ಎದುರಿಗೆ ಬಂದ ಕಾರು ಢಿಕ್ಕಿ ಹೊಡೆದಿದೆ. ಅಪಘಾತದದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ವಿನೋದ್ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೆ ಸೋಮವಾರ ರಾತ್ರಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.ಈ ಸಂಬಂಧ ಸಿದ್ದಾರ್ಥ ನಗರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next