Advertisement

ಉದಯವಾಣಿ ರೇಷ್ಮೆ ಜತೆ ದೀಪಾವಳಿ ಫೋಟೋ ಸ್ಪರ್ಧೆಗೆ ಸಿದ್ಧರಾಗಿ

12:18 AM Oct 14, 2022 | Team Udayavani |

ಮಣಿಪಾಲ: ಬೆಳಕಿನ ಹಬ್ಬ ದೀಪಾವಳಿ ಆಚರಣೆಗೆ ಈಗಾಗಲೇ ಎಲ್ಲೆಡೆ ತಯಾರಿಗಳು ಆರಂಭವಾಗಿವೆ. ದೀಪಾವಳಿ ಅಂದ ಕೂಡಲೇ ಹೊಸ ಬಟ್ಟೆಯ ಸಂಭ್ರಮ ಎಲ್ಲರ ಮನದಲ್ಲೂ ಮೂಡುತ್ತದೆ. ಈಗಾಗಲೇ ಹೊಸ ಬಟ್ಟೆ ಖರೀದಿ ಎಲ್ಲೆಡೆ ಭರದಿಂದ ಸಾಗುತ್ತಿದೆ.

Advertisement

ಪ್ರತೀ ವರ್ಷದಂತೆ ಈ ಬಾರಿ ಕೂಡ ಉದಯವಾಣಿ ರೇಷ್ಮೆ ಜತೆ ದೀಪಾವಳಿ ಫೋಟೋ ಸ್ಪರ್ಧೆಯನ್ನು ಆಯೋಜಿಸಲಿದೆ. ರೇಷ್ಮೆ ಸೀರೆ-ಉಡುಗೆಗಳನ್ನು ದೀಪಾವಳಿ ಸಂದರ್ಭ ತೊಟ್ಟು ಸಂಭ್ರಮಿಸಿದ ಫೋಟೋಗಳನ್ನು ಕಳುಹಿಸಿ ಬಹುಮಾನ ಗೆಲ್ಲಲು ಅವಕಾಶವಿದೆ.

ರೇಷ್ಮೆಯ ಪ್ರತಿಷ್ಠಿತ ಸ್ಥಾನವನ್ನು ಮತ್ತಷ್ಟು ಉನ್ನತಿಗೇರಿಸುವುದು ಹಾಗೂ ಸಾಂಪ್ರದಾಯಿಕತೆಗೆ ಒತ್ತು ನೀಡುವುದು ಈ ಸ್ಪರ್ಧೆಯ ಉದ್ದೇಶ. ಮನೆ ಮಂದಿ, ಕುಟುಂಬ ಸದಸ್ಯೆಯರು, ಗೆಳತಿಯರು ಹೀಗೆ ಗುಂಪಾಗಿ ಎಲ್ಲರೂ ರೇಷ್ಮೆ ಸೀರೆ ಧರಿಸಿ ದೀಪಾವಳಿ ಆಚರಿಸುವ ಫೋಟೋ ತೆಗೆದು ಕಳುಹಿಸಬಹುದು.

ಕಳೆದ ವರ್ಷ ಉಡುಪಿ, ದಕ್ಷಿಣ ಕನ್ನಡ, ಕಾಸರಗೋಡು, ಕೊಡಗು ಜಿಲ್ಲೆಯ ಸಾವಿರಾರು ಮಂದಿ ಇದರಲ್ಲಿ ಭಾಗವಹಿಸಿದ್ದರು. ಈ ಬಾರಿ ಮತ್ತೂಮ್ಮೆ ರೇಷ್ಮೆ ಸೀರೆ ಧರಿಸಿ ಹಬ್ಬವನ್ನು ಸಂಭ್ರಮಿಸಿ, ಅದನ್ನು ಚಿತ್ರದ ಮೂಲಕ ಕಟ್ಟಿಕೊಳ್ಳಲು ಸಿದ್ಧತೆಗಳನ್ನು ಮಾಡಿಕೊಳ್ಳಿ. ಸ್ಪರ್ಧೆಯ ನಿಯಮಾವಳಿಗಳನ್ನು ಶೀಘ್ರವೇ ಪ್ರಕಟಿಸಲಾಗುವುದು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next