Advertisement

Udayavani Campaign: ಕುಕ್ಕೆ ಸುಬ್ರಹ್ಮಣ್ಯಕ್ಕೆ ಬೆಂಗಳೂರೇ ಹತ್ತಿರ, ಸನಿಹದ ಊರೇ ದೂರ!

01:26 PM Jun 25, 2024 | Team Udayavani |

ಸುಬ್ರಹ್ಮಣ್ಯ ರಾಜ್ಯದ ಶ್ರೀಮಂತ ದೇವಸ್ಥಾನ ಇರುವ ಊರು. ಇಲ್ಲಿಗೆ ರಾಜ್ಯದ ನಾನಾ ಭಾಗಗಳಿಂದ ಭಕ್ತರು ಬರುತ್ತಾರೆ. ಆದರೆ, ಇಲ್ಲಿನ  ಶಾಲೆ ಮತ್ತು ಕಾಲೇಜಿಗೆ ಬರಲು ಪಕ್ಕದ ಊರಿನ ವಿದ್ಯಾರ್ಥಿಗಳೇ ಹರಸಾಹಸ ಪಡಬೇಕಾಗಿದೆ. ಇಲ್ಲಿ ಸುಸಜ್ಜಿತ ಬಸ್‌ ನಿಲ್ದಾಣವಿದೆ. ವಿವಿಧ ಜಿಲ್ಲೆ, ಬೆಂಗಳೂರಿಗೂ ಇಲ್ಲಿಂದ ಕನೆಕ್ಷನ್‌ ಇದೆ. ಆದರೆ ಇಲ್ಲಿನ ವಿದ್ಯಾರ್ಥಿಗಳು ಅನುಭವಿಸುವ ವಿವಿಧ ಸಂಕಟಕ್ಕೆ ಇನ್ನೂ ಮುಕ್ತಿ ಸಿಕ್ಕಿಲ್ಲ. ಹೀಗಾಗಿ ಸುಬ್ರಹ್ಮಣ್ಯಕ್ಕೆ ಬೆಂಗಳೂರೇ ಹತ್ತಿರ, ಪಕ್ಕದ ಊರುಗಳೇ ದೂರವಾದ ಪರಿಸ್ಥಿತಿ ನಿರ್ಮಾಣವಾಗಿದೆ.

Advertisement

ಗ್ರಾಮೀಣ ಭಾಗದಲ್ಲಿ ಜಟಿಲ !
ಸುಬ್ರಹ್ಮಣ್ಯಕ್ಕೆ ವಿದ್ಯಾಭ್ಯಾಸಕ್ಕೆ ಬರುವ ವಿದ್ಯಾರ್ಥಿಗಳಲ್ಲಿ ಗ್ರಾಮೀಣ ಭಾಗದವರೇ ಅಧಿಕ. ಅವರಿಗೆ ನೇರ ಬಸ್‌ ಕಡಿಮೆ. ಸುಬ್ರಹ್ಮಣ್ಯದಿಂದ ಒಂದು ಬಸ್‌ ನಲ್ಲಿ ಹೋಗಿ ಇನ್ನೊಂದು ಬಸ್‌ ಅಥವಾ ಖಾಸಗಿ ವಾಹನ ಹಿಡಿಯಬೇಕಾದ ಸ್ಥಿತಿ ಇದೆ. ಸಮಯ ಸ್ವಲ್ಪ ತಪ್ಪಿದರೂ ಮನೆ ತಲುವುದೇ ರಾತ್ರಿಯಾಗುತ್ತದೆ. ಕೊಲ್ಲಮೊಗ್ರು, ಮಡಪ್ಪಾಡಿ, ಬಳ್ಪ, ಕೊಂಬಾರು, ಕೊಣಾಜೆ, ಕಲ್ಲುಗುಡ್ಡೆ, ಎಡಮಂಗಲ ಸೇರಿದಂತೆ ವಿವಿಧ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಸಮರ್ಪಕ ಬಸ್‌ ವ್ಯವಸ್ಥೆ ಅಗತ್ಯವಾಗಿ ಆಗಬೇಕಿದೆ.

ಕುಕ್ಕೆ ಸುಬ್ರಹ್ಮಣ್ಯದಿಂದ ದೂರದ ಊರುಗಳಿಂದ ಆಗಮಿಸುವ ಯಾತ್ರಿಕರಿಗೆ ಹೆಚ್ಚಿನ ಆದ್ಯತೆ ನೀಡಿ ಸಮರ್ಪಕ ಬಸ್‌ ವ್ಯವಸ್ಥೆ ಒದಗಿಸಿದ್ದರೂ ಕುಕ್ಕೆಗೆ ಹೊಂದಿಕೊಂಡಿರುವ ಸ್ಥಳೀಯ ಊರುಗಳಿಗೆ ಇನ್ನೂ ಸಮರ್ಪಕವಾದ ಬಸ್‌ ಸೌಲಭ್ಯ ಕಲ್ಪಿಸಲು ಸಾಧ್ಯವಾಗದಿರುವುದು ದುರಂತ. ಶಾಲಾ-ಕಾಲೇಜಿಗೆ ತೆರಳುವ ಹಾಗೂ ಸಂಜೆ ಶಾಲಾ-ಕಾಲೇಜಿನಿಂದ ಮನೆಗೆ ಬರುವ ಸಮಯಕ್ಕೆ ಆದರೂ ಸಮರ್ಪಕ ಬಸ್‌ ವ್ಯವಸ್ಥೆ ಕಲ್ಪಿಸಬೇಕು ಎಂದು ಆಗ್ರಹ ವ್ಯಕ್ತವಾಗಿದೆ.

ಸುಬ್ರಹ್ಮಣ್ಯ-ಕಡಬ ಮಾರ್ಗ
ಸುಬ್ರಹ್ಮಣ್ಯದಿಂದ ಕಡಬ ಮೂಲಕ ಮಂಗಳೂರಿಗೆ ಬಸ್‌ ವ್ಯವಸ್ಥೆಯಿದ್ದು, ಈ ಭಾಗದಿಂದ ಆಗಮಿಸುವ ಹಾಗೂ ತೆರಳುವ ವಿದ್ಯಾರ್ಥಿಗಳು ವಿವಿಧ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಬೆಳಗ್ಗೆ ಹಾಗೂ ಸಂಜೆ ಶಾಲಾ ಸಮಯದಲಿ ಬಸ್‌ಗಳು ಪ್ರಯಾಣಿಕರಿಂದ ತುಂಬಿರುವುದರಿಂದ ಪ್ರಮುಖ ಕೇಂದ್ರಗಳನ್ನು ಹೊರತು ಪಡಿಸಿ ಉಳಿದೆಡೆಗಳಲ್ಲಿ ಬಸ್‌ಗಾಗಿ ಕಾಯುವ ವಿದ್ಯಾರ್ಥಿಗಳು ಸಮಯಕ್ಕೆ ಸರಿಯಾಗಿ ತರಗತಿ ತಲುಪಲು ಸಾಧ್ಯವಾಗುತ್ತಿಲ್ಲ. ಸುಬ್ರಹ್ಮಣ್ಯದಿಂದ ಕಡಬ ಭಾಗಕ್ಕೆ ಸಂಜೆ 6.30ರ ಬಳಿಕ ಯಾವುದೇ ಬಸ್‌ ವ್ಯವಸ್ಥೆ ಇಲ್ಲದೇ ಇರುವುದರಿಂದ ವಿದ್ಯಾರ್ಥಿಗಳು ತೊಂದರೆಯಲ್ಲಿದ್ದಾರೆ.

ಸುಬ್ರಹ್ಮಣ್ಯ-ಪುತ್ತೂರು ಮಾರ್ಗ
ಸುಬ್ರಹ್ಮಣ್ಯದಿಂದ ಪುತ್ತೂರಿಗೆ ಕಾಣಿಯೂರು ಹಾಗೂ ಬೆಳ್ಳಾರೆ ಮಾರ್ಗವಾಗಿ ಬಸ್‌ ಸಂಚರಿಸುತ್ತದೆ. ಕಾಣಿಯೂರು-ನಿಂತಿಕಲ್ಲು-ಪಂಜ ಭಾಗದಿಂದ ಸುಬ್ರಹ್ಮಣ್ಯಕ್ಕೆ ಹೆಚ್ಚಿನ ವಿದ್ಯಾರ್ಥಿಗಳು ಆಗಮಿಸುತ್ತಿದ್ದು, ಶಾಲಾ ಸಮಯದಲ್ಲಿ ಬಸ್‌ ರಶ್‌ ಇರುವುದರಿಂದ ಪ್ರಯಾಣ ಕಷ್ಟ ಸಾಧ್ಯವಾಗುತ್ತಿದ್ದು, ಕೆಲ ವಿದ್ಯಾರ್ಥಿಗಳು ಬಸ್‌ ನಿಲ್ಲಸದೇ ಅಥವಾ ಬಸ್‌ ನಲ್ಲಿ ಜಾಗ ಸಿಗದೇ ತರಗತಿಗೆ ತಡವಾಗಿ ತಲುಪುವ ಸ್ಥಿತಿಯೂ ಇಲ್ಲಿದೆ.

Advertisement

ಸುಬ್ರಹ್ಮಣ್ಮ -ಗುತ್ತಿಗಾರು- ಸುಳ್ಯ
ಸುಬ್ರಹ್ಮಣ್ಯ- ಗುತ್ತಿಗಾರು-ಸುಳ್ಯಕ್ಕೆ ಸೀಮಿತ ಬಸ್‌ ಗಳಿದ್ದು, ವಿದ್ಯಾರ್ಥಿಗಳು ಸಮಸ್ಯೆ ಪಡುವಂತಾಗಿದೆ. ಬೆಳಗ್ಗೆ ಹಾಗೂ ಸಂಜೆ
ಸುಬ್ರಹ್ಮಣ್ಯದಿಂದ ಮತ್ತು ಸುಬ್ರಹ್ಮಣ್ಯಕ್ಕೆ ಸಮರ್ಪಕ ಬಸ್‌ ವ್ಯವಸ್ಥೆ ಇಲ್ಲದೇ ಇರುವುದರಿಂದ ವಿದ್ಯಾರ್ಥಿಗಳು ಸಂಕಷ್ಟ
ಅನುಭವಿಸುತ್ತಿಸುತ್ತಿದ್ದಾರೆ. ಇರುವ ಬಸ್‌ಗಳು ತುಂಬಿರುವುದರಿಂದ ಮಾರ್ಗ ಮಧ್ಯೆ ಬಸ್‌ಗಾಗಿ ಕಾಯುವ ವಿದ್ಯಾರ್ಥಿಗಳಿಗೆ ಬಸ್‌
ನಿಲ್ಲಿಸುವುದಿಲ್ಲ, ನಿಲ್ಲಿಸಿದರೂ ಅದಾಗಲೇ ಬಸ್‌ ತುಂಬಿರುತ್ತದೆ.

*ದಯಾನಂದ ಕಲ್ನಾರ್‌

Advertisement

Udayavani is now on Telegram. Click here to join our channel and stay updated with the latest news.

Next