Advertisement

Satish Jarkiholi ಮುಂದಿನ ಸಿಎಂ ಅಭಿಯಾನ ನಾವು ಶುರು ಮಾಡಿಲ್ಲ

07:43 PM Sep 09, 2024 | Team Udayavani |

ಹುಕ್ಕೇರಿ:ದೇಶದಲ್ಲಿ ಹಲವಾರು ಮುಖ್ಯಮಂತ್ರಿ, ಸಚಿವರ ಮೇಲೆ ಕೇಸ್‌ಗಳಿವೆ. ಅದರ ಪಾಡಿಗೆ ಅದರ ಕೆಲಸ ನಡೆದಿರುತ್ತದೆ. ಮುಖ್ಯಮಂತ್ರಿ ರಾಜೀನಾಮೆ ಕೊಡುವ ಪ್ರಶ್ನೆ ಬರುವುದಿಲ್ಲ. ಮುಂದಿನ ಸಿಎಂ ಅಭಿಯಾನ ನಾವು ಶುರು ಮಾಡಿಲ್ಲ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಸ್ಪಷ್ಟಪಡಿಸಿದ್ದಾರೆ.

Advertisement

ಸುದ್ದಿಗಾರರ ಜತೆ ಮಾತನಾಡಿದ ಅವರು, ಪದೇ ಪದೇ ಮುಖ್ಯಮಂತ್ರಿ ವಿಷಯ ಚರ್ಚೆ ಅನವಶ್ಯಕ. ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ, ಕಾಂಗ್ರೆಸ್‌ ಸರ್ಕಾರವೇ ಮುಂದುವರೆಯುತ್ತದೆ. ಸಚಿವರಿಗೆ ಕೆಲಸವಿಲ್ಲ ಎಂದು ಜನರು ನಮ್ಮನ್ನು ಉಗಿಯುತ್ತಿದ್ದಾರೆ. ಸಾಕಷ್ಟು ಅಭಿವೃದ್ಧಿ ಕೆಲಸಗಳಿವೆ.

ಮುಂದಿನ ಮುಖ್ಯಮಂತ್ರಿ ಅಭಿಯಾನವನ್ನು ನಾವು ಯಾರೂ ಶುರು ಮಾಡಿಲ್ಲ. ಅದನ್ನು ಬಿಟ್ಟು ಅಭಿವೃದ್ಧಿ ಬಗ್ಗೆ ಮಾತನಾಡಿ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next