Advertisement

ಉಚ್ಚಿಲ: ವೈಭವದ ಶೋಭಾಯಾತ್ರೆ; ಶಾರದೆ, ನವದುರ್ಗೆಯರಿಗೆ ಹೆಲಿಕಾಪ್ಟರ್‌ ಮೂಲಕ ಪುಷ್ಪಾರ್ಚನೆ

12:02 AM Oct 06, 2022 | Team Udayavani |

ಉಚ್ಚಿಲ: ಶ್ರೀ ಕ್ಷೇತ್ರ ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ 10 ದಿನಗಳ ಕಾಲ ಜರಗಿದ ಉಚ್ಚಿಲ ದಸರಾ ಉತ್ಸವ 2022 ಸಂಪನ್ನಗೊಂಡಿದ್ದು, ವೈಭವದ ಶೋಭಾ ಯಾತ್ರೆಗೆ ದ.ಕ. ಮೊಗವೀರ ಮಹಾಜನ ಸಂಘದ ಗೌರವ ಸಲಹೆಗಾರ ಡಾ| ಜಿ. ಶಂಕರ್‌ ಅವರು ಗಣ್ಯರ ಸಮ್ಮುಖದಲ್ಲಿ ಬುಧವಾರ ಸಂಜೆ ಚಾಲನೆ ನೀಡಿದರು.

Advertisement

ಪ್ರಧಾನ ತಂತ್ರಿ ವೇ| ಮೂ| ರಾಘವೇಂದ್ರ ತಂತ್ರಿ ಕೊರಂಗ್ರಪಾಡಿ ಮತ್ತು ಪ್ರಧಾನ ಅರ್ಚಕ ವೇ| ಮೂ| ರಾಘವೇಂದ್ರ ಉಪಾಧ್ಯಾಯ ಅವರ ನೇತೃತ್ವದಲ್ಲಿ ಶಾರದಾ ಮಾತೆ ಮತ್ತು ನವದುರ್ಗೆಯರ ಮೂರ್ತಿಗಳ ಶೋಭಾ ನಡೆಯಿತು. ಉಚ್ಚಿಲದಿಂದ ಹೊರಟ ಶೋಭಾಯಾತ್ರೆಯು ಪಡುಬಿದ್ರಿ, ಹೆಜಮಾಡಿ, ಉಚ್ಚಿಲ, ಮೂಳೂರು, ಕೊಪ್ಪಲಂಗಡಿ ಮಾರ್ಗವಾಗಿ ಕಾಪುವಿಗೆ ಬಂದು ಗುರುವಾರ ಮುಂಜಾನೆ ಸಮುದ್ರ ಮಧ್ಯದಲ್ಲಿ ಕೃತಕವಾಗಿ ನಿರ್ಮಿಸಲಾದ ಸಾಂಸ್ಕೃತಿಕ ನಗರದಲ್ಲಿ ಮೂರ್ತಿಗಳನ್ನು ಜಲಸ್ತಂಭನಗೊಳಿಸಲಾಯಿತು.

ಟ್ಯಾಬ್ಲೋಗಳ ರಂಗು
ಹತ್ತಾರು ವಿಧದ ಟ್ಯಾಬ್ಲೋಗಳು ಶೋಭಾಯಾತ್ರೆಗೆ ಮೆರುಗು ನೀಡಿದವು. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಕೇರಳ ಮತ್ತು ತಮಿಳುನಾಡಿನಿಂದ ತರಿಸಲಾದ ಪೌರಾಣಿಕ ಹಿನ್ನೆಲೆ ಮತ್ತು ಸಾಂಸ್ಕೃತಿಕ ಹಿನ್ನೆಲೆ ಸಾರುವ ಟ್ಯಾಬ್ಲೋಗಳು, ನವದುರ್ಗೆಯರ ಟ್ಯಾಬ್ಲೋ, ಮೊಗವೀರ ಕುಲಗುರು, ಮೀನುಗಾರರ ಕುಲಕಸುಬು, ಜಾಗೃತಿ ಸಂದೇಶ ನೀಡುವ ಟ್ಯಾಬ್ಲೋಗಳು, ವಿವಿಧ ಹುಲಿವೇಷ ತಂಡಗಳು, ಭಜನ ತಂಡಗಳು, ಡೋಲು, ವಾದ್ಯ, ಬ್ಯಾಂಡ್‌, ನಾಸಿಕ್‌ ಬ್ಯಾಂಡ್‌, ಸಾವಿರಾರು ಬೈಕ್‌ಗಳ ಸಹಿತವಾಗಿ ಶೋಭಾಯಾತ್ರೆ ನಡೆಯಿತು.  ಪಡುಬಿದ್ರಿ, ಹೆಜಮಾಡಿ, ಉಚ್ಚಿಲ, ಕೊಪ್ಪಲಂಗಡಿ ಮತ್ತು ಕಾಪು ಬೀಚ್‌ನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ, ಹುಲಿ ವೇಷ ಕುಣಿತ ಇತ್ಯಾದಿಗಳು ವಿಶೇಷ ಮೆರುಗು ನೀಡಿದವು.

ಶಿಸ್ತುಬದ್ಧ ಶೋಭಾಯಾತ್ರೆ
ಶಿಸ್ತುಬದ್ಧವಾಗಿ ನಡೆದ ಉಚ್ಚಿಲ-ಹೆಜಮಾಡಿ – ಪಡುಬಿದ್ರಿ -ಉಚ್ಚಿಲ-ಕಾಪು ವರೆಗಿನ 28 ಕಿ.ಮೀ. ವರೆಗಿನ ಶೋಭಾಯಾತ್ರೆಯಲ್ಲಿ ಸಾವಿರಾರು ಮಂದಿ ನಡೆದೇ ಪಾಲ್ಗೊಂಡಿದ್ದರು. ಕಾಪು ಬೀಚ್‌ನಲ್ಲಿ ನಡೆದ ಜಲಸ್ತಂಭನ ಸಂದರ್ಭ ಲಕ್ಷದ ಸನಿಹ ಜನರಿದ್ದರು. ಶಿಸ್ತುಬದ್ಧ ಶೋಭಾಯಾತ್ರೆ ನಡೆದಿದ್ದು ಹಿರಿಯ ಪೊಲೀಸ್‌ ಅಧಿಕಾರಿಗಳೂ ಸೇರಿದಂತೆ ನೂರಾರು ಸಿಬಂದಿ ಬಂದೋಬಸ್ತ್ ಏರ್ಪಡಿಸಿದ್ದರು.

ದ.ಕ. ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ. ಕೋಟ್ಯಾನ್‌, ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷ ವಾಸುದೇವ ಸಾಲ್ಯಾನ್‌, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಗುಂಡು ಅಮೀನ್‌, ಶಾಸಕರಾದ ಲಾಲಾಜಿ ಆರ್‌. ಮೆಂಡನ್‌, ರಘುಪತಿ ಭಟ್‌, ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾ ಮಂಡಳದ ಅಧ್ಯಕ್ಷ ಡಾ| ಎಂ.ಎನ್‌. ರಾಜೇಂದ್ರ ಕುಮಾರ್‌, ಕಸಾಪ ಮಾಜಿ ಅಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು, ಮೈಸೂರು ಎಲೆಕ್ಟ್ರಿಕಲ್‌ ಇಂಡಸ್ಟ್ರೀಸ್‌ ಲಿ. ಅಧ್ಯಕ್ಷ ಕೆ. ಉದಯ ಕುಮಾರ್‌ ಶೆಟ್ಟಿ, ಬೆಣ್ಣೆಕುದ್ರು ಕುಲಮಹಾಸ್ತ್ರೀ ಅಮ್ಮನವರ ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ಆನಂದ ಸಿ. ಕುಂದರ್‌, ದ.ಕ. ಮತ್ತು ಉಡುಪಿ ಜಿಲ್ಲಾ ಮೀನು ಮಾರಾಟ ಫೆಡರೇಶನ್‌ ಅಧ್ಯಕ್ಷ ಯಶ್‌ಪಾಲ್‌ ಸುವರ್ಣ, ಸಹಕಾರಿ ಧುರೀಣ ಡಾ| ದೇವಿಪ್ರಸಾದ್‌ ಶೆಟ್ಟಿ ಬೆಳಪು, ದ.ಕ. ಮೊಗವೀರ ಮಹಾಜನ ಸಂಘದ ಪದಾಧಿಕಾರಿಗಳಾದ ಸುಭಾಶ್ಚಂದ್ರ ಕಾಂಚನ್‌, ಸುಧಾಕರ ಕುಂದರ್‌, ಭರತ್‌ ಎರ್ಮಾಳು, ಮಹಿಳಾ ಸಂಘದ ಅಧ್ಯಕ್ಷೆ ಅಪ್ಪಿ ಸಾಲ್ಯಾನ್‌, ಪ್ರಮುಖರಾದ ಶಂಕರ್‌ ಸಾಲ್ಯಾನ್‌, ಮೋಹನ್‌ ಬೆಂಗ್ರೆ, ಉಮೇಶ್‌ ಟಿ. ಕರ್ಕೇರ, ಭರತ್‌ ಉಳ್ಳಾಲ, ಸತೀಶ್‌ ಕುಂದರ್‌, ಶರಣ್‌ ಮಟ್ಟು, ಶ್ರೀಪತಿ ಭಟ್‌, ಸತೀಶ್‌ ಅಮೀನ್‌ ಪಾಲ್ಗೊಂಡಿದ್ದರು.

Advertisement

ಹೆಲಿಕಾಪ್ಟರ್‌ ಮೂಲಕ ಪುಷ್ಪಾರ್ಚನೆ
ಶಾರದಾ ಮಾತೆ ಮತ್ತು ನವದುರ್ಗೆಯರ ಮೂರ್ತಿಗಳನ್ನು ಇರಿಸಿದ ವಾಹನಗಳಿಗೆಹೆಲಿಕಾಪ್ಟರ್‌ ಮೂಲಕ 9 ಬಣ್ಣಗಳ ಪುಷ್ಪ ದಳಗಳೊಂದಿಗೆ ಪುಷ್ಪಾìರ್ಚನೆಗೈಯ್ಯಲಾಯಿತು.

 

Advertisement

Udayavani is now on Telegram. Click here to join our channel and stay updated with the latest news.

Next