Advertisement

ಯೂಟರ್ನ್ ರೈಲ್ವೇ ಮಾರ್ಗ ರದ್ದು, ಸವಾರರಿಗೆ ಸಂತಸ

04:12 PM Nov 21, 2020 | Suhan S |

ಬಂಗಾರಪೇಟೆ: ಪಟ್ಟಣದಿಂದ ಬೂದಿಕೋಟೆ ಹೋಬಳಿ ಮಾರ್ಗದಲ್ಲಿರುವ ಬಂಗಾರಪೇಟೆ-ಕೋಲಾರ ರೈಲ್ವೆ ಮಾರ್ಗ ಹಳಿಯನ್ನು ಹಾದು ಹೋಗುವುದನ್ನು ರೈಲ್ವೆ ಇಲಾಖೆಯು ನಿಲ್ಲಿಸಿ ಯೂಟರ್ನ್ ಮಾಡಿಕೊಂಡು ಬರುವ ವಾಹನ ಸವಾರರಿಗೆ ತೀವ್ರ ಕಿರಿಕಿರಿಯಾಗಿದ್ದರಿಂದ, ಸಂಸದ ಎಸ್‌.ಮುನಿಸ್ವಾಮಿ ಹಾಗೂ ಸ್ಥಳೀಯ ಶಾಸಕ ಎಸ್‌. ಎನ್‌.ನಾರಾಯಣಸ್ವಾಮಿ ಪರಿಶ್ರಮದ ಫ‌ಲವಾಗಿ ಯುಟರ್ನ್ ಮಾಡುವುದನ್ನು ರದ್ದು ಮಾಡಿ ರೈಲ್ವೆ ಹಳಿ ಮೇಲಿನ ಸಂಚಾರಕ್ಕೆ ರೈಲ್ವೆ ಇಲಾಖೆಯು ಅನುಮತಿ ನೀಡಿರುವುದರಿಂದ ಈ ಭಾಗದ ಜನರಿಗೆ ಸಂತಸವಾಗಿದೆ.

Advertisement

ಕಷ್ಟಕರವಾಗಿತ್ತು: ಬಂಗಾರಪೇಟೆಯಿಂದ ಬೂದಿ ಕೋಟೆ ಹೋಬಳಿ ಸೇರಿದಂತೆ ಮಾಲೂರು ತಾಲೂಕಿಗೆ ಹಾದುಹೋಗುವ ಈ ಮಾರ್ಗದಲ್ಲಿ ಪ್ರತಿನಿತ್ಯ  ಸಾವಿರಾರು ವಾಹನಗಳು ಸಂಚಾರ ಮಾಡುತ್ತಿದ್ದು,ಬೂದಿಕೋಟೆ ಮುಖ್ಯ ರಸ್ತೆಗೆ ಹಾದುಹೋಗಲು ಸೇಟ್‌ಕಾಂಪೌಂಡ್‌ ಬಳಿ ಯೂಟರ್ನ್ ಮಾಡಲು ತೀವ್ರಕಷ್ಟಕರವಾಗಿತ್ತು.

ಹಿಂದೆ ಈ ರಸ್ತೆಯಲ್ಲಿ ಬಂಗಾರಪೇಟೆ-ಕೋಲಾರ ರೈಲ್ವೆ ಹಳಿ ಮೇಲೆಯೇ ವಾಹನಗಳ ಸಂಚಾರವಿತ್ತು. ಎರಡು ವರ್ಷಗಳ ಹಿಂದೆ ಕೇಂದ್ರ ರೈಲ್ವೆ ಇಲಾಖೆಯು ರೈಲ್ವೆ ಮಾರ್ಗವನ್ನು ಸುತ್ತುಕೊಂಡು ಬರಲು ವ್ಯವಸ್ಥೆ ಮಾಡಿದ್ದರಿಂದ ವಾಹನಗಳ ಸಂಚಾರರಿಗೆ ತೀವ್ರ ಕಷ್ಟವೇ ಆಗಿತ್ತು.

ಈ ಬಗ್ಗೆ ಸ್ಥಳೀಯ ಶಾಸಕ ಎಸ್‌.ಎನ್‌. ನಾರಾಯಣಸ್ವಾಮಿ ತೀವ್ರ ವಿರೋಧ ವ್ಯಕ್ತಪಡಿಸಿದರೂ ಸಹ ರೈಲ್ವೆ ಇಲಾಖೆಯು ರೈಲ್ವೆ ಮಾರ್ಗದ ಬಳಿ ವಾಹನ ಸಂಚಾರಕ್ಕೆ ಹೆಚ್ಚು ವಿರೋಧ ವ್ಯಕ್ತಪಡಿಸಿತ್ತು. ಈ ಮಾರ್ಗದಲ್ಲಿ ಬೂದಿಕೋಟೆ ಹೋಬಳಿ ಅಲ್ಲದೇ ಮಾಲೂರು ತಾಲೂಕು ಹಾಗೂ ತಮಿಳುನಾಡು ರಾಜ್ಯಗಳಿಗೆ ಭಾರೀ ವಾಹನಗಳು ಸಂಚಾರ ಮಾಡಿದ್ದರಿಂದ ರೈಲ್ವೆ ಇಲಾಖೆಯು ತಾತ್ಕಾಲಿಕವಾಗಿ ಯೂಟರ್ನ್ ರಸ್ತೆ ನಿರ್ಮಾಣ ಮಾಡಿದ್ದರಿಂದ ರಸ್ತೆಯು ತೀವ್ರವಾಗಿ ಹದಗೆಟ್ಟಿದ್ದರೂ ರೈಲ್ವೆ ಇಲಾಖೆಯು ಯಾವುದೇಕ್ರಮಕೈಗೊಳ್ಳದಿದ್ದರಿಂದ ಶಾಸಕರ ಆಕ್ರೋಶಕ್ಕೆ ಕಾರಣವಾಗಿತ್ತು. ಜೊತೆಗೆ ಹಲವಾರು ಸಂಘಟನೆಗಳು ಪ್ರತಿಭಟನೆ ಮಾಡಿದ್ದರೂ ಸಹ ರೈಲ್ವೆ ಇಲಾಖೆಯು ಯಾವುದೇ ಕ್ರಮ ಕೈಗೊಂಡಿರಲಿಲ್ಲ.

ಮೆಚ್ಚುಗೆ: ಸಂಸದ ಎಸ್‌.ಮುನಿಸ್ವಾಮಿಬಂಗಾರಪೇಟೆಗೆ ಆಗಮಿಸುತ್ತಿದ್ದ ಪ್ರತಿ ಬಾರಿಯೂ ಶಾಸಕ ಎಸ್‌.ಎನ್‌.ನಾರಾಯಣಸ್ವಾಮಿ, ಸೇರಿದಂತೆ ಬಿಜೆಪಿ ಮುಖಂಡರು, ವಿವಿಧ ಸಂಘಟನೆಗಳ ಮುಖಂಡರು ಒತ್ತಡ ಹೇರುತ್ತಿದ್ದರು. ಈ ಸಮಸ್ಯೆ ಬಗೆಹರಿಸಲು ಸಂಸದರು ಬೆಂಗಳೂರಿನಿಂದ ಹಿಡಿದುದೆಹೆಲಿವರೆಗೂ ಹೋರಾಟ ನಡೆಸಿದ್ದರು. ತಾಲೂಕಿನ ಜನತೆಗೆ ಸಂಸದರು ನೀಡಿದ್ದ ಭರವಸೆ ನಿಧಾನವಾದರೂ ಸಾಧನೆ ಮಾಡಿರುವುದಕ್ಕೆ ಜನಪ್ರತಿನಿಧಿ ಗಳು ಸೇರಿದಂತೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Advertisement

ದಿ.ಸುರೇಶ್‌ ಅಂಗಡಿ ಅವರನ್ನು ನೆನೆದ ಸಂಸದ ಮುನಿಸ್ವಾಮಿ : ಬಂಗಾರಪೇಟೆ ಜನತೆಗೆ ಕೊಟ್ಟ ಮಾತಿನಂತೆ ಈ ಸಮಸ್ಯೆಯನ್ನು ಬಗೆಹರಿಸಲಾಗಿದ್ದು,ಕೇಂದ್ರರೈಲ್ವೆ ಸಹಾಯಕ ಸಚಿವರಾಗಿದ್ದ ದಿ.ಸುರೇಶ  ಅಂಗಡಿಯವರ ಸಹಾಯದಿಂದ ಈ ಸಮಸ್ಯೆ ಬಗೆಹರಿದಿದೆ. ಅವರು ನಮ್ಮನಗಲಿ ದ್ದರೂಅವರುಮಾಡಿದ್ದಆದೇಶದಮೇರೆಗೆ ಸಮಸ್ಯೆ ಇತ್ಯರ್ಥವಾಗಿದೆ ಎಂದು ಸಂಸದ ಎಸ್‌.ಮುನಿಸ್ವಾಮಿ ತಿಳಿಸಿದರು. ಉದಯವಾಣಿಗೆ ಪ್ರತಿಕ್ರಿಯಿಸಿದ ಅವರು, ಈ ಸಮಸ್ಯೆ ಪ್ರತಿನಿತ್ಯ ಸಾವಿರಾರು ವಾಹನ ಸವಾರರಿಗೆ ಸಂಕಷ್ಟ ಎದುರಾಗಿತ್ತು. ಸ್ಥಳೀಯ ಶಾಸಕರು,ಬಿಜೆಪಿಮುಖಂಡರು ಸೇರಿದಂತೆ

ಸಾರ್ವಜನಿಕರು ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಸಮಸ್ಯೆ ಇರುವ ಸ್ಥಳಕ್ಕೆ ರೈಲ್ವೆ ಅಧಿಕಾರಿಗಳನ್ನು ಕರೆಯಿಸಿ ಪರಿಶೀಲನೆ ಮಾಡಿಸಿ ಸೂಕ್ತ ಕ್ರಮ ಕೈಗೊಳ್ಳಲು ಶ್ರಮಿಸಿದ್ದರ ಫ‌ಲವಾಗಿ ಸಮಸ್ಯೆ ಬಗೆಹರಿದಿದೆ ಎಂದು ಹೇಳಿದರು.

ರೈಲ್ವೆ ಅಂಡರ್‌ಪಾಸ್‌ ಸಮಸ್ಯೆ ಬಗೆಹರಿಸಲಿ :  ಈ ಹಿಂದೆ ರೈಲ್ವೆ ಇಲಾಖೆಯು ಅವೈಜ್ಞಾನಿಕವಾಗಿ ಬಂಗಾರಪೇಟೆ-ಕೋಲಾರ ರೈಲ್ವೆ ಮಾರ್ಗದ ಬಳಿ ವಾಹನ ಸಂಚಾರ ಮಾರ್ಗಬದಲಾವಣೆಮಾಡಿದ್ದರಿಂದ ಸಾರ್ವಜನಿಕರಿಗೆ, ಸವಾರರಿಗೆ ತೀವ್ರ ಅನಾನುಕೂಲ ವಾಗಿತ್ತು. ಸಂಸದರೊಂದಿಗೆ ರೈಲ್ವೆ ಇಲಾಖೆಯ ಅಧಿಕಾರಿ ಗಳಿಗೆ ಸಮಸ್ಯೆ ಬಗ್ಗೆ ಮನದಟ್ಟು ಮಾಡಿ ಬಗೆಹರಿಸಲು ಶ್ರಮಿಸಲಾಗಿದೆ ಎಂದು ಬಂಗಾರಪೇಟೆ ಕ್ಷೇತ್ರದ ಶಾಸಕರಾದ ಎಸ್‌.ಎನ್‌.ನಾರಾಯಣಸ್ವಾಮಿ ತಿಳಿಸಿದರು.

ಉದಯವಾಣಿಗೆ ಪ್ರತಿಕ್ರಿಯಿಸಿದ ಅವರು, ರೈಲ್ವೆ ಇಲಾಖೆಯು ಸಾಮಾನ್ಯ ಜನರಿಗೆ ಅನುಕೂಲ ವಾಗುವ ರೀತಿಯಲ್ಲಿ ಕಾಮಗಾರಿ ಮಾಡುತ್ತಿಲ್ಲ. ಇನ್ಮುಂದೆ ಸ್ಥಳೀಯವಾಗಿ ಶಾಸಕರು, ಸಂಸದರಜೊತೆ ಚರ್ಚೆ ಮಾಡಿ ಕ್ರಮ ಕೈಗೊಳ್ಳಬೇಕಾಗಿದ್ದು, ರೈಲ್ವೆ ಅಂಡರ್‌ಪಾಸ್‌ಗಳ ಸಮಸ್ಯೆಯನ್ನು ಬಗೆಹರಿ ಸಲು ಶ್ರಮಿಸುತ್ತಿರುವ ಸಂಸದ ಎಸ್‌.ಮುನಿಸ್ವಾಮಿ ಅವರಿಗೆ ಧನ್ಯವಾದಗಳು ಎಂದು ಹೇಳಿದರು.

 

ಎಂ.ಸಿ.ಮಂಜುನಾಥ್‌

Advertisement

Udayavani is now on Telegram. Click here to join our channel and stay updated with the latest news.

Next