Advertisement

ಹೆಚ್ಚು ಕುಡೀಬೇಡ ಎಂದು ಕಸ್ಕರ್‌ಗೆ ಹೇಳಿದ್ದ ದಾವೂದ್‌

06:50 AM Sep 25, 2017 | Team Udayavani |

ಮುಂಬೈ: ಪೊಲೀಸರ ವಶದಲ್ಲಿರುವ ಇಕ್ಬಾಲ್‌ ಕಸ್ಕರ್‌ ತನ್ನ ಸೋದರ ದಾವೂದ್‌ ಇಬ್ರಾಹಿಂ ಕುರಿತು ದಿನಕ್ಕೊಂದು ವಿಚಾರವನ್ನು ಬಹಿರಂಗಪಡಿಸುತ್ತಿದ್ದಾನೆ. 

Advertisement

2011ರಲ್ಲಿ ತನ್ನ ಮೇಲೆ ದಾಳಿಯಾದಾಗ ದಾವೂದ್‌ ನನಗೆ ಕರೆ ಮಾಡಿ ಮಾತಾಡಿದ್ದ. ಹೆಚ್ಚು ಕುಡಿಯಬೇಡ, ಆದಷ್ಟು ಜಾಗರೂಕನಾಗಿರು ಎಂದು ಸಲಹೆ ನೀಡಿದ್ದ ಎಂದು ಕಸ್ಕರ್‌ ಪೊಲೀಸರ ಮುಂದೆ ಬಾಯಿಬಿಟ್ಟಿದ್ದಾನೆ. 

ಇದೇ ವೇಳೆ, ದಾವೂದ್‌ ಪತ್ನಿ ಕಳೆದ ವರ್ಷ ಮುಂಬೈಗೆ ಬಂದಿದ್ದ ವಿಚಾರದಲ್ಲಿ ಕೇಂದ್ರ ಸರ್ಕಾರವನ್ನು ಕಾಂಗ್ರೆಸ್‌ ತರಾಟೆಗೆ ತೆಗೆದುಕೊಂಡಿದೆ. ಆಕೆ ಬಂದು ಹೋಗುವವರೆಗೂ ಕೇಂದ್ರ, ರಾಜ್ಯ ಸರ್ಕಾರಗಳು, ಭದ್ರತಾ ಸಂಸ್ಥೆಗಳು ನಿದ್ರಿಸುತ್ತಿದ್ದವೇ ಎಂದು ಕಾಂಗ್ರೆಸ್‌ ಪ್ರಶ್ನಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next