Advertisement

U.P: ಸರಯೂ ದಂಡೆಯಲ್ಲಿ ಸಂಪುಟ ಸಭೆ- ಅಯೋಧ್ಯೆಗೆ ಸಂಬಂಧಿಸಿದ ಹಲವು ನಿರ್ಣಯ ಅಂಗೀಕಾರ

01:29 AM Nov 10, 2023 | Team Udayavani |

ಲಕ್ನೋ: ರಾಮಮಂದಿರ ಉದ್ಘಾಟನೆಗೆ ಸಜ್ಜುಗೊಂಡಿರುವ ಉತ್ತರಪ್ರದೇಶದಲ್ಲಿ ಇದೇ ಮೊದಲ ಬಾರಿಗೆ ಅಯೋಧ್ಯೆಯ ಸರಯೂ ನದಿದಂಡೆಯಲ್ಲಿ ಸಚಿವ ಸಂಪುಟ ಸಭೆ ನಡೆಸಲಾಗಿದೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ದೇಗುಲ ವಸ್ತುಸಂಗ್ರಹಾಲಯ ನಿರ್ಮಾಣ ಸೇರಿದಂತೆ ಹಲವು ಪ್ರಸ್ತಾವಗಳಿಗೆ ಅನುಮೋದನೆ ನೀಡಲಾಗಿದೆ.

Advertisement

ಸರಯೂ ನದಿದಂಡೆಯ ರಾಮಕಥಾ ಮಂಟಪದಲ್ಲಿ ಸಭೆ ನಡೆಸಲಾಗಿದ್ದು, ಯೋಗಿ ಸೇರಿ ಸಚಿವರೆಲ್ಲರೂ “ಶ್ರೀ ಸೀತಾ ರಾಮ’ ಹೆಸರಿರುವ ಶಾಲುಗಳನ್ನು ಧರಿಸಿ ಹಾಜರಾಗಿದ್ದು ವಿಶೇಷ. ಸಭೆಗೂ ಮುನ್ನ ಹನುಮಾನ್‌ ಗಹಿ ಹಾಗೂ ರಾಮ ಮಂದಿರದಲ್ಲಿ ಯೋಗಿ ಆದಿತ್ಯನಾಥ ಅವರು ಪೂಜೆ ಸಲ್ಲಿಸಿದ್ದಾರೆ.

ಸಾಮಾನ್ಯವಾಗಿ ಸಂಪುಟ ಸಭೆ ಬಳಿಕ ಅಧಿಕಾರಿಗಳು ಮಾಹಿತಿ ನೀಡುತ್ತಾರೆ. ಆದರೆ ಈ ಬಾರಿ ಖುದ್ದು ಮುಖ್ಯಮಂತ್ರಿಗಳೇ ಸಂಪುಟದ ನಿರ್ಣಯಗಳ ಬಗ್ಗೆ ಮಾಧ್ಯ ಮಗಳಿಗೆ ಮಾಹಿತಿ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next