Advertisement

ಭೂತಃಕಾಲಕ್ಕೆ ಯು/ಎ

11:35 AM Dec 12, 2018 | |

ಕಳೆದು ಹೋದ ಕಾಲದ ಸುತ್ತ ಒಂದಷ್ಟು ಚಿತ್ರಗಳು ಈಗಾಗಲೇ ಮೂಡಿಬಂದಿವೆ. ಆ ಸಾಲಿಗೆ ಈಗ “ಭೂತಃಕಾಲ’ ಎಂಬ ಹೊಸಬರ ಚಿತ್ರವೂ ಒಂದು ಸೇರಿದೆ. ಹಂಸ ಶ್ರೀಕಾಂತ್‌ ನಿರ್ಮಾಣದ ಈ ಚಿತ್ರಕ್ಕೆ ಸಚಿನ್‌ ಬಾಡಾ ನಿರ್ದೇಶಕರು.

Advertisement

ಇತ್ತೀಚೆಗೆ ಚಿತ್ರ ವೀಕ್ಷಿಸಿದ ಸೆನ್ಸಾರ್‌ ಮಂಡಳಿ, ಯಾವುದೇ ಕಟ್‌ ಹೇಳದೆ ಚಿತ್ರಕ್ಕೆ ಯು/ಎ ಪ್ರಮಾಣ ಪತ್ರ ನೀಡಿದೆ. ಸದ್ಯಕ್ಕೆ ಬಿಡುಗಡೆ ತಯಾರಿ ನಡೆಸುತ್ತಿರುವ ಈ ಚಿತ್ರಕ್ಕೆ ಸಿಜೋ ಕೆ. ಜೋಸ್‌ ಅವರು ಛಾಯಾಗ್ರಹಣ ಮಾಡಿದ್ದಾರೆ.  ಪ್ರಮೋದ್‌ ಸೂರ್ಯ ಅವರ ಸಂಗೀತವಿದೆ.

ಮುತ್ತುರಾಜ್‌ ಅವರು ಸಂಕಲನ ಮಾಡಿದರೆ, ಕುಮಾರ್‌ ಆರಾಧ್ಯ, ಕೊಳಾ‌ಲಿ ಪ್ರಸಾದ್‌ ಶೆಟ್ಟಿ, ನವೀನ್‌ ಕುಮಾರ್‌, ಚೇತನ ಮಹೇಶ್‌ ಅವರು ಕಾರ್ಯ ನಿರ್ವಹಣೆ ಮಾಡಿದ್ದಾರೆ. ಚಿತ್ರದಲ್ಲಿ ಆನಂದ್‌ ಗಣೇಶ್‌, ರಕ್ಷಿತಾ, ಅನನ್ಯಾಭಟ್‌, ಟೆನ್ನಿಸ್‌ ಕೃಷ್ಣ, ಶ್ರೀನಿವಾಸ ಪ್ರಭು, ಅರುಣಾ ಬಾಲರಾಜ್‌, ಕಿರಣ್‌ ಕುಮಾರ್‌, ತರಂಗ ವಿಶ್ವ, ಬೇಬಿ ವೈಭ, ಹರೀಶ್‌, ರಮೇಶ್‌ ನಟಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next