Advertisement

Panaji ದ್ವಿಚಕ್ರ ವಾಹನ ಕಳ್ಳತನ ಪ್ರಕರಣ: ಆರೋಪಿ ಬಂಧನ

05:17 PM Aug 22, 2023 | Team Udayavani |

ಪಣಜಿ: ವಾಹನ ಕಳ್ಳತನ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಗೋವಾ ಪೊಲೀಸರು ಹೆಚ್ಚಿನ ನಿಗಾ ವಹಿಸಿದ್ದಾರೆ, ಇಂದಹದ್ದೇ ಒಂದು ಪ್ರಕರಣದಲ್ಲಿ  ಗೋವಾದ ಕುಳೆ ಪೊಲೀಸರು ಕರ್ನಾಟಕದ ಯುವಕನನ್ನು ಬಂಧಿಸಿದ್ದಾರೆ.

Advertisement

ಮಾಹಿತಿ ಪ್ರಕಾರ ಕರ್ನಾಟಕದ ಯುವಕನೊಬ್ಬ ದ್ವಿಚಕ್ರವಾಹನ ಕಳವು ಮಾಡಿರುವ ಬಗ್ಗೆ ಕುಳೆ ಪೊಲೀಸರಿಗೆ ಮಾಹಿತಿ ಸಿಕ್ಕಿತ್ತು. ಶಿವಾನಂದ ಹೂವಪ್ಪ ಭಜಂತ್ರಿ (ವಯಸ್ಸು 19, ಧಾರವಾಡ, ಕರ್ನಾಟಕ) ದೂಧಸಾಗರ ರೆಸಾರ್ಟ್ ಮೋಳೆಯಲ್ಲಿ ಸಂಚಾರ ತಪಾಸಣೆ ನಡೆಸುತ್ತಿದ್ದಾಗ ಕುಳೆ ಠಾಣೆ ಪೊಲೀಸರು ಬಂಧಿಸಿದ್ದಾರೆ. ಆತನಿಂದ ಜಿಎ.12.ಬಿ.0847 ನೋಂದಣಿ ಸಂಖ್ಯೆಯ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ.

ಬಂಧಿತ ಆರೋಪಿ ಬೇರೆ ಯಾವುದಾದರೂ ಕಳ್ಳತನದಲ್ಲಿ ಭಾಗಿಯಾಗಿದ್ದಾರೆಯೇ ಎಂಬ ಬಗ್ಗೆ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next