Advertisement

ಮಣಿಪುರ : ಅಪರಿಚಿತ ದುಷ್ಕರ್ಮಿಗಳಿಂದ 2 ಟ್ರಕ್ಕುಗಳಿಗೆ ಬೆಂಕಿ

12:09 PM Aug 16, 2018 | udayavani editorial |

ಇಂಪಾಲ : ಮಣಿಪುರದ ತಮೇಂಗ್ಲಾಂಗ್‌ ಜಿಲ್ಲೆಯ ಗ್ರಾಮವೊಂದರಲ್ಲಿ ಅಪರಿಚಿತ ದುಷ್ಕರ್ಮಿಗಳು ಇಂದು ಆವಶ್ಯಕ ವಸ್ತುಗಳ ಪೂರೈಕೆಯಲ್ಲಿ ನಿರತವಾಗಿದ್ದ ಎರಡು ಟ್ರಕ್ಕುಗಳಿಗೆ ಬೆಂಕಿ ಹಚ್ಚಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

ನಿನ್ನೆ ಬುಧವಾರ ಮಧ್ಯರಾತ್ರಿಯಿಂದ 24 ತಾಸುಗಳ ಬಂದ್‌ಗೆ ಜೆಲಿಯಾಂಗ್ರಾಂಗ್‌ ಬೌದಿ ಮತ್ತು ಅದರ ಮಿತ್ರ ಕೂಟದವರು ನೀಡಿದ ಕರೆಗೆ ಸಂಬಂಧಪಟ್ಟು ಜೆಲಿಯಾಂಗ್ರಾಂಗ್‌ ಪ್ರದೇಶದಲ್ಲಿ ಈ ಘಟನೆ ನಡೆದಿದೆ. 

ರಾಜ್ಯ ರಾಜಧಾನಿಯಿಂದ 54 ಕಿ.ಮೀ. ದೂರವಿರುವ ತುಪುಲ್‌ ಪ್ರದೇಶದಲ್ಲಿನ ಇಂಪಾಲ – ಜಿರಿ ರಸ್ತೆಯ ಎನ್‌ಎಚ್‌ 37ರಲ್ಲಿ ಈ ಘಟನೆ ನಡೆದಿರುವುದಾಗಿ ಹಿರಿಯ ಪೊಲೀಸ್‌ ಅಧಿಕಾರಿ ತಿಳಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next