Advertisement

ಬಿಹಾರ:ರಸ್ತೆ ನಿರ್ಮಾಣ ಕಂಪೆನಿಯ ಇಬ್ಬರು ಕಾರ್ಮಿಕರ ಗುಂಡಿಕ್ಕಿ ಹತ್ಯೆ

03:23 PM Jan 13, 2017 | Team Udayavani |

ಛಾಪ್ರಾ, ಬಿಹಾರ : ಬಿಹಾರದ ಶರಣ್‌ ಜಿಲ್ಲೆಯ ಗ್ರಾಮವೊಂದರಲ್ಲಿ ರಸ್ತೆ ನಿರ್ಮಾಣ ಕಂಪೆನಿಯೊಂದರ ಇಬ್ಬರು ಕಾರ್ಮಿಕರನ್ನು ಅಪರಿಚಿತ ಹಂತಕರು ಗುಂಡಿಕ್ಕಿ ಕೊಂದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

Advertisement

ಭಗವಾನ್‌ಪುರ ಗ್ರಾಮಕ್ಕೆ ಸಮೀಪದಲ್ಲಿನ ಕಂಪೆನಿಯ ಕ್ಯಾಂಪ್‌ ಆಪೀಸಿನ ಮೇಲೆ ದಾಳಿ ನಡೆಸಿದ ಹಂತಕರು ಅಲ್ಲಿದ್ದ ಇಬ್ಬರು ಕಾರ್ಮಿಕರಾದ ಲಾಲ್‌ಬಾಬು ಮಿಶ್ರಾ 35 ಮತ್ತು ಧರಮ್‌ವೀರ್‌ ಕುಮಾರ್‌ ರಾಯ್‌ 34 ಎಂಬವರನ್ನು ಗುಂಡಿಕ್ಕಿ ಕೊಂದರು ಎಂದು ಎಸ್‌ಪಿ ಪಂಕಜ್‌ ಕುಮಾರ್‌ ರಾಜ್‌ ತಿಳಿಸಿದ್ದಾರೆ.

ರಸ್ತೆ ಕಾಮಗಾರಿ ಕಂಪೆನಿಯ ಕಾರ್ಮಿಕರನ್ನು ಹಂತಕರು ಕೊಂದಿರುವ ಹಿಂದಿನ ಉದ್ದೇಶವೇನು ಎಂಬ ಬಗ್ಗೆ ಈಗ ಪೊಲೀಸರು ತೀವ್ರ ತನಿಖೆ ನಡೆಸುತ್ತಿದ್ದಾರೆ ಎಂದು ಎಸ್‌ಪಿ ತಿಳಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next