Advertisement

ಪಣಂಬೂರು: ಬೀಚ್ ನಲ್ಲಿ ಈಜಲು ಇಳಿದಿದ್ದ ಮೈಸೂರು ಮೂಲದ ಇಬ್ಬರು ನೀರುಪಾಲು

12:02 PM May 30, 2022 | Team Udayavani |

ಪಣಂಬೂರು: ಈಜಲು ತೆರಳಿದ್ದ ಇಬ್ಬರು ಸಮುದ್ರದ ಅಲೆಗೆ ಸಿಲುಕಿ ನೀರುಪಾಲಾದ ಘಟನೆ ಪಣಂಬೂರು ಬೀಚ್ ನಲ್ಲಿ ಸೋಮವಾರ ( ಮೇ. 30 ರಂದು) ನಡೆದಿದೆ.

Advertisement

ಮೈಸೂರು ಮೂಲದ ದಿವಾಕರ್ ಆರಾಧ್ಯ (45), ನಿಂಗಪ್ಪ (60) ಮೃತ ದುರ್ಧೈವಿಗಳೆಂದು ತಿಳಿದು ಬಂದಿದೆ.

ಮೈಸೂರಿನ ಅವಿನಾಶ್ ಮತ್ತು ಅವರ ಮೂವರು ಸ್ನೇಹಿತರು ಮಂಗಳೂರಿನಲ್ಲಿ ನಡೆಯುತ್ತಿದ್ದ ಹಲಸಿನ ಮೇಳಕ್ಕೆ ಶುಕ್ರವಾರ ( ಮೇ 27 ರಂದು) ಸಂಜೆ ಬಂದಿದ್ದು, ಸೋಮವಾರ ( ಮೇ 30) ರಂದು ಬೆಳಗ್ಗಿನ 7:30 ರ ವೇಳೆಗೆ ಪಣಂಬೂರು ಬೀಚ್ ಗೆ ವಿಹಾರಕ್ಕೆಂದು ಬಂದಿದ್ದಾರೆ.  ಬೀಚ್ ನಲ್ಲಿ ಈಜಲು ಇಳಿದ ನಾಲ್ವರಲ್ಲಿ ಆರಾಧ್ಯ ಹಾಗೂ ನಿಂಗಪ್ಪ ಸಮುದ್ರದ ಅಲೆಗಳ ಸೆಳೆತಕ್ಕೆ ಸಿಲುಕಿ ನೀರುಪಾಲಾಗಿದ್ದಾರೆ.

ನೀರುಪಾಲಾದ ಇಬ್ಬರ ಮೃತದೇಹ ಪತ್ತೆಯಾಗಿದೆ.

ಈ ಬಗ್ಗೆ ಅವಿನಾಶ್ ಕೊಟ್ಟ ದೂರಿನಂತೆ ಪಣಂಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next