Advertisement

‘ಹೆಂಡ್ತಿ’ವಿಚಾರಕ್ಕೆ ಇಬ್ಬರು ಗಂಡಂದಿರ ಜಗಳ ಕೊಲೆಯಲ್ಲಿ ಅಂತ್ಯ!

10:01 AM Jan 25, 2020 | Hari Prasad |

ಬೆಂಗಳೂರು: ಪತ್ನಿಯ ವಿಚಾರವಾಗಿ ಇಬ್ಬರ ನಡುವೆ ನಡೆದ ಜಗಳ ಮಹಿಳೆಯ ಮೊದಲನೇ ಪತಿಯ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಕಾವಲ್‌ಭೈರಸಂದ್ರದಲ್ಲಿ ನಡೆದಿದೆ. ಶ್ರೀನಿವಾಸ ನಗರದ ಇರ್ಫಾನ್‌ ಕೊಲೆಯಾದವರು. ಕೊಲೆ ಆರೋಪಿ ತೌಫೀಕ್‌ ಎಂಬಾತನನ್ನು ಬಂಧಿಸಿರುವ ಡಿ.ಜೆ ಹಳ್ಳಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Advertisement

ಎಲೆಕ್ಟ್ರೀಶಿಯನ್‌ ಕೆಲಸ ಮಾಡುವ ಇರ್ಫಾನ್‌ ಕೆಲವು ವರ್ಷಗಳ ಹಿಂದೆ ತಸ್ಲಿಮಾ (ಹೆಸರು ಬದಲಿಸಲಾಗಿದೆ) ಎಂಬಾಕೆಯನ್ನು ಮದುವೆ ಆಗಿದ್ದು ಸಂಸಾರ ಮಾಡುತ್ತಿದ್ದ. ಕೌಟುಂಬಿಕ ಕಲಹದಿಂದ ಪತ್ನಿಯನ್ನು ಆತ ತೊರೆದಿದ್ದು ಬೇರೆ ಬೇರೆಯಾಗಿದ್ದರು.
ಆ ಬಳಿಕ ತಸ್ಲಿಮಾ ತೌಫೀಕ್‌ನನ್ನು ಮದುವೆಯಾಗಿ ಆತನೊಂದಿಗೆ ವಾಸಿಸುತ್ತಿದ್ದಳು. ಈ ವಿಚಾರವಾಗಿ ತೌಫೀಕ್‌ನೊಂದಿಗೆ ಇರ್ಫಾನ್‌ ಹಲವು ಬಾರಿ ಜಗಳ ಮಾಡಿದ್ದನು.

ಬುಧವಾರ ರಾತ್ರಿ ಪಾನಮತ್ತನಾಗಿದ್ದ ಇರ್ಫಾನ್‌ ಕಾವಲ್‌ ಭೈರಸಂದ್ರದ ಆಟೋ ನಿಲ್ದಾಣದಲ್ಲಿ ತೌಫೀಕ್‌ ಜತೆ ಜಗಳವಾಡಿದಾಗ ಇಬ್ಬರ ನಡುವೆ ಹೊಡೆದಾಟ ನಡೆದಿತ್ತು. ಈ ಸಂದರ್ಭದಲ್ಲಿ ತೌಫೀಕ್‌ ಚಾಕುವಿನಿಂದ ಇರ್ಫಾನ್‌ಗೆ ಹಲವು ಬಾರಿ ಇರಿದು ಪರಾರಿಯಾಗಿದ್ದ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಇರ್ಫಾನ್‌ನನ್ನು ಸ್ಥಳೀಯರು ಕೂಡಲೇ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫ‌ಲಿಸದೆ ಆತ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next