Advertisement

ಸಾಲ ಬಾಧೆ ತಾಳಲಾರದೆ ಇಬ್ಬರು ರೈತರ ಆತ್ಮಹತ್ಯೆ

02:37 AM Aug 08, 2020 | Hari Prasad |

ಬೀದರ್: ಸಾಲದ ಬಾಧೆ ತಾಳಲಾರದೆ ಬೀದರ್ ಜಿಲ್ಲೆಯಲ್ಲಿ ಶುಕ್ರವಾರ ಇಬ್ಬರು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

Advertisement

ಭಾಲ್ಕಿ ತಾಲೂಕಿನ ಹಾಲಹಳ್ಳಿ (ಕೆ) ಗ್ರಾಮದ ರೈತ ಗೌಡಪ್ಪ ಸಿದ್ರಾಮಪ್ಪ ನೀಲಾ (68) ಎಂಬ ರೈತ ಗ್ರಾಮದ ಹಾಳು ಬಾವಿಯಲ್ಲಿ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಪಿಕೆಪಿಎಸ್‌ನಲ್ಲಿ 2.5 ಲಕ್ಷ ರೂ. ಮತ್ತು ಕೆಜಿಬಿ ಬ್ಯಾಂಕ್‌ನಲ್ಲಿ 60 ಸಾವಿರ ರೂ. ಸಾಲ ಪಡೆದಿದ್ದರು. ಸಮಯಕ್ಕೆ ಸಾಲ ಮರು ಪಾವತಿ ಮಾಡಲಾಗದ ಕಾರಣ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಇನ್ನೊಂದು ಪ್ರಕರಣದಲ್ಲಿ, ಚಿಟಗುಪ್ಪ ತಾಲೂಕಿನ ನೀರ್ಣಾ ಗ್ರಾಮದಲ್ಲಿ ನರಸಪ್ಪ ಮಲ್ಕಪ್ಪ (65) ಎಂಬ ರೈತ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ.

ರಾಷ್ಟ್ರೀಕೃತ ಬ್ಯಾಂಕ್‌ನಲ್ಲಿ ಕೃಷಿ ಚಟುವಟಿಕೆಗಾಗಿ ಸಾಲ ಪಡೆದಿದ್ದ ನರಸಪ್ಪ ತಾನು ಪಡೆದುಕೊಂಡಿದ್ದ ಸಾಲವನ್ನು ಸಕಾಲದಲ್ಲಿ ಪಾವತಿಸಲು ಸಾಧ್ಯವಾಗದೇ ನೊಂದು ಆತ್ಮಹತ್ಯೆ ಮಾಡಕೊಂಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next