Advertisement

Fraud: ಮೋದಿ ಸ್ಕೀಮ್‌ನಲ್ಲಿ ನಿಮಗೆ ಹಣ ಬಂದಿದೆ ಎಂದು ಇಬ್ಬರಿಗೆ ಮೋಸ: ಪ್ರಕರಣ ದಾಖಲು

09:28 PM Aug 31, 2023 | Team Udayavani |

ಸವಣೂರು: ಮೋದಿ ಸ್ಕೀಮ್‌ನಲ್ಲಿ ನಿಮಗೆ ಹಣ ಬಂದಿದೆ ಎಂದು ಅಮಾಯಕರಿಂದ ಚಿನ್ನ, ಹಣ ಪಡೆದು ವಂಚಿಸುತ್ತಿದ್ದ ವ್ಯಕ್ತಿಯನ್ನು ಉಪ್ಪಿನಂಗಡಿ ಪೊಲೀಸರು ಇತ್ತೀಚೆಗೆ ಬಂಧಿಸಿದ್ದು, ಇದೀಗ ಅದೇ ಮಾದರಿಯಲ್ಲಿ ಬೆಳ್ಳಾರೆ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಎರಡು ಪ್ರಕರಣ ನಡೆದಿದ್ದು, ವಂಚನೆಗೊಳಗಾದ ಇಬ್ಬರು ಬೆಳ್ಳಾರೆ ಪೊಲೀಸರಿಗೆ ದೂರು ನೀಡಿದ್ದಾರೆ.

Advertisement

ಕೊಡಿಯಾಲ ಗ್ರಾಮ, ಸುಳ್ಯ ನಿವಾಸಿ ರಾಧಾಕೃಷ್ಣ ಗೌಡ (67) ಅವರು ಬೆಳ್ಳಾರೆ ಪೊಲೀಸರಿಗೆ ದೂರು ನೀಡಿದ್ದು,ನಾನು ಬೆಳ್ಳಾರೆ ಕೆಳಗಿನ ಪೇಟೆಯಲ್ಲಿರುವ ಪ್ರಯಾಣಿಕರ ತಂಗುದಾಣದಲ್ಲಿದ್ದಾಗ ಅಪರಿಚಿತ ವ್ಯಕ್ತಿಯೋರ್ವ ಬಂದು ತನ್ನನ್ನು ಬ್ಯಾಂಕ್‌ ಉದ್ಯೋಗಿ ಎಂದು ಪರಿಚಯಿಸಿಕೊಂಡಿದ್ದ. ಕೋವಿಡ್‌ ಸಾಂಕ್ರಾಮಿಕ ರೋಗದ ಕಾರಣಕ್ಕೆ ಪ್ರಧಾನ ಮಂತ್ರಿಯವರ ಪರಿಹಾರ ನಿಧಿಯಿಂದ ಕೆಲವು ಆಯ್ದ ವ್ಯಕ್ತಿಗಳಿಗೆ 1 ಲಕ್ಷದ 7 ಸಾವಿರ ರೂ. ಹಣ ಬಂದಿದ್ದು, ಈ ಹಣವನ್ನು ಪಡೆಯಲು 7 ಸಾವಿರ ನಗದು ಕೊಡಿ ಎಂದು ಹೇಳಿದ್ದ. ಈ ಸಂದರ್ಭ ನನ್ನಲ್ಲಿ ಹಣವಿಲ್ಲದಿದ್ದ ಕಾರಣದಿಂದ ಸುಮಾರು ಐದೂವರೆ ಗ್ರಾಂ ತೂಕದ ಚಿನ್ನದ ಉಂಗುರವನ್ನು ನೀಡಿದ್ದೆ. ಈ ಉಂಗುರವನ್ನು ಪಡೆದುಕೊಂಡ ಆ ವ್ಯಕ್ತಿ ವಂಚಿಸಿ ಪರಾರಿಯಾಗಿದ್ದಾನೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಪ್ರಕರಣ ದಾಖಲಾಗಿದ್ದು, ತನಿಖೆ ಮುದುವರಿದಿದೆ.

ಇನ್ನೊಂದು ಅದೇ ತೆರನಾದ ಪ್ರಕರಣ
ಇನ್ನೊಂದು ಪ್ರಕರಣದಲ್ಲಿ ಕಡಬ ತಾಲೂಕು ಕುದ್ಮಾರು ಗ್ರಾಮದ ಕೆಡೆಂಜಿ ನಿವಾಸಿ ಲೀಲಾವತಿ (55) ಅವರು ದೂರು ನೀಡಿದ್ದು, ನಾನು ಮನೆಯಲ್ಲಿದ್ದಾಗ ಅಂದಾಜು 45 ವರ್ಷ ಪ್ರಾಯದ ಅಪರಿಚಿತ ವ್ಯಕ್ತಿಯೊಬ್ಬ ಬಂದು ತಾನು ಬ್ಯಾಂಕ್‌ ಉದ್ಯೋಗಿಯೆಂದು ಪರಿಚಯಿಸಿಕೊಂಡಿದ್ದ. ನಿಮ್ಮ ಬ್ಯಾಂಕ್‌ ಖಾತೆಗೆ ಪ್ರಧಾನಮಂತ್ರಿಗಳ ಯೋಜನೆಯಿಂದ 1,00,000 ರೂ. ಹಣ ಬಂದಿದೆ. ಅದನ್ನು ನೀವು ಪಡೆಯಲು 31,000 ರೂ. ಹಣ ಡೆಪಾಸಿಟ್‌ ಮಾಡಬೇಕು ಎಂದು ಹೇಳಿದಂತೆ ಹಣ ಪಡೆದಉ ವಂಚಿಸಿದ್ದಾಗಿ ದೂರಿನಲ್ಲಿ ತಿಳಿಸಲಾಗಿದೆ. ಬೆಳ್ಳಾರೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next