Advertisement

ಕಲಬುರಗಿ: ಮೀನು ಹಿಡಿಯಲು ಹೋದ ಬಾಲಕರಿಬ್ಬರು ನೀರುಪಾಲು

07:17 PM Jul 11, 2022 | Team Udayavani |

ಕಲಬುರಗಿ: ಮೀನು ಹಿಡಿಯಲು ಹೋಗಿ ಈಜು ಬಾರದೇ ಕೆರೆಯಲ್ಲಿ ಮುಳುಗಿ ಇಬ್ಬರು ಬಾಲಕರು ಸಾವನ್ನಪ್ಪಿದ ದುರ್ಘಟನೆ ಅಫಜಲಪುರ ತಾಲೂಕಿನ ಕೊಳ್ಳೂರ್ ಗ್ರಾಮದಲ್ಲಿ ಸೋಮವಾರ ನಡೆದಿದೆ.

Advertisement

ಗೊಬ್ಬರು ಗ್ರಾಮದವಿಶ್ವದೀಪ್ ಭೋವಿ(16) ಮತ್ತು ಬಂದರವಾಡ ಗ್ರಾಮದ ದಿಲೀಪ್ ಭೋವಿ(17) ಮೃತ ದುರ್ದೈವಿಗಳಾಗಿದ್ದು, ಮಧ್ಯಾಹ್ನ ಗ್ರಾಮದ ಹೊರವಲಯದಲ್ಲಿನ‌ ಕೆರೆಯಲ್ಲಿ ಮೀನು ಹಿಡಿಯಲು ಹೋಗಿದ್ದು, ಈ ವೇಳೆ ಈಜು ಬಾರದೇ ಕೆರೆ ಕೆಸರಲ್ಲಿ ಸಿಲುಕಿ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ.ಫರಹತ್ತಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next