Advertisement

ಇಬ್ಬರ ಬಂಧನ, 17 ವಾಹನ ವಶ

02:32 PM Sep 11, 2020 | Suhan S |

ಕೆಜಿಎಫ್: ಉರಿಗಾಂ ವೃತ್ತದ ಪೊಲೀಸರು ಇಬ್ಬರು ದ್ವಿಚಕ್ರ ವಾಹನ ಕಳ್ಳರನ್ನು ಬಂಧಿಸಿ, ಅವರಿಂದ 17 ದ್ವಿಚಕ್ರ ವಾಹನ ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

Advertisement

ಆರೋಪಿಗಳಾದ ಬೆಂಗಳೂರು ಟಿ.ಸಿ.ಪಾಳ್ಯ ನಿವಾಸಿ ಸತೀಶ್‌ ಕೊಂಡಾ (19), ಕೆಜಿಎಫ್ ಸಮೀಪದ ದಾಸರ ಹೊಸಹಳ್ಳಿಯ ನಿವಾಸಿ ವಿನೋದ್‌ ಕುಮಾರ್‌ ಬಿನ್‌ ಬಾಲಾಜಿರಾವ್‌ (19) ಎಂಬುವವರನ್ನು ಬಂಧಿಸಿ, ಅವರಿಂದ17 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿರುತ್ತಾರೆ. ದಾಸರಹೊಸಹಳ್ಳಿ ಲ್ಯಾಂಡ್‌ ಮಾರ್ಕ್‌ ಸಮೀಪದ ನಿವಾಸಿ ಸೂರ್ಯ ಬಿನ್‌ ನಾಗಪ್ಪ (18) ಎಂಬಾತನು ತಲೆಮರೆಸಿಕೊಂಡಿರುತ್ತಾರೆ.

ಹೋಂಡಾ ಡಿಯೋ 09, ಬಜಾಜ್‌ ಪಲ್ಸರ್‌ 01, ಬಜಾಜ್‌ ಸಿಟಿ-100: 02 ವಾಹನ, ಹಿರೋ ಸ್ಪೈಂಡ್ಲರ್‌ 01, ಹೋಂಡಾ ಆಕ್ಟೀವಾ 01, ಟಿವಿಎಸ್‌ ಫಿಯರೋ 01, ಹೋಂಡಾ ಶೈನ್‌ 01, ಯಮಹಾ ಆರ್‌.ಎಕ್ಸ್‌ 01 ವಾಹನ ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳು ದ್ವಿಚಕ್ರ ವಾಹನಗಳನ್ನು ಬೆಂಗಳೂರು ನಗರದ ಕಾಡುಗೋಡಿ, ಮಹದೇವಪುರ, ಆವಲಹಳ್ಳಿ, ಮೇಡಹಳ್ಳಿ, ಜೀವನ್‌ ಭೀಮಾನಗರ ಮುಂತಾದ ಸ್ಥಳಗಳಲ್ಲಿ ಕಳವು ಮಾಡಿರುತ್ತಾರೆ.

ಆರೋಪಿಗಳನ್ನು ಮತ್ತು ದ್ವಿಚಕ್ರ ವಾಹನಗಳನ್ನು ಪತ್ತೆ ಮಾಡುವಲ್ಲಿ ಪೊಲೀಸ್‌ ವರಿಷ್ಠಾಧಿಕಾರಿ ಇಲಕ್ಕಿಯಾ ಕರುಣಾಕರನ್‌ ಅವರ ಮಾರ್ಗದರ್ಶನ, ಡಿವೈಎಸ್ಪಿ ಬಿ.ಕೆ. ಉಮೇಶ ನೇತೃತ್ವದಲ್ಲಿಉರಿಗಾಂ ಸಿಪಿಐ ಮುಸ್ತಾಕ್‌ಪಾಷ,ಪಿಎಸ್‌ಐ ಆರ್‌.ವಿಜಯ್‌, ಸಿಬ್ಬಂದಿ ಗಳಾದ ಸುನೀಲ್‌ಕುಮಾರ್‌, ಸಿದ್ದುಸುಂ ಟ್ಯಾನ್‌, ಶಂಕರ್‌, ಮಹೇಂದ್ರಪ್ರಸಾದ್‌, ಆನಂದಕುಮಾರ್‌, ಮಂಜುಳಾ ರವರು ಯಶಸ್ವಿಯಾಗಿರುತ್ತಾರೆಂದು ಕೇಂದ್ರವಲಯ ಐಜಿಪಿ ಸೀಮಾಂತ ಕುಮಾರ್‌ ಸಿಂಗ್‌ ಪ್ರಶಂಶಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next