Advertisement

ಗಾಂಧಿನಗರಕ್ಕೆ ಹಾರಿದ ತುಳುವಿನ ಕುವರ!

12:05 PM Jun 28, 2018 | |

ಕಾಮಿಡಿ ಪಾತ್ರಗಳ ಮೂಲಕ ಕರಾವಳಿಯಲ್ಲಿ ನಾಟಕ ಹಾಗೂ ಕಾಮಿಡಿ ಶೋ ಮೂಲಕ ಗುರುತಿಸಿಕೊಂಡ ಕಲಾವಿದ ತುಳು ಸಿನೆಮಾದಲ್ಲಿ ಅವಕಾಶ ಪಡೆದು, ಈಗ ಕನ್ನಡ ಸಿನೆಮಾದಲ್ಲೂ ಅವಕಾಶ ಪಡೆಯುವುದು ಸುಲಭದ ಮಾತಲ್ಲ. ತುಳುವಿನಲ್ಲಿ ಇತ್ತೀಚೆಗೆ ಬಂದ ಹಲವು ಸಿನೆಮಾದಲ್ಲಿ ಗಮನೀಯ ಪಾತ್ರ ಮಾಡುವ ಮೂಲಕ ಗಮನಸೆಳೆದ ಖ್ಯಾತ ನಟ ಮಂಜು ರೈ ಮೂಳೂರು ಸದ್ದಿಲ್ಲದೆ ಗಾಂಧಿನಗರದತ್ತಲೂ ಮುಖ ಮಾಡಿದ್ದಾರೆ.

Advertisement

ತುಳು ಸಿನೆಮಾದ ಮೂಲಕ ಕೋಸ್ಟಲ್‌ವುಡ್‌ನ‌ಲ್ಲಿ ಕಾಮಿಡಿ ಲುಕ್‌ನಲ್ಲಿ ಸಾಕಷ್ಟು ಪ್ರಸಿದ್ಧಿ ಪಡೆದ ಮಂಜು ಈಗ ಕನ್ನಡ ಸಿನೆಮಾದಲ್ಲೂ ಕಾಣುವ ಹುಮ್ಮಸ್ಸಿನಲ್ಲಿದ್ದಾರೆ. ಅಂದಹಾಗೆ, ತುಳುವಿನ ಬಹುನಿರೀಕ್ಷೆಯ ‘ಮೈ ನೇಮ್‌ ಈಸ್‌ ಅಣ್ಣಪ್ಪ’ ಸಿನೆಮಾದಲ್ಲಿ ವಿಭಿನ್ನ ಪಾತ್ರದ ಮೂಲಕ ಗಮನಸೆಳೆದ ಮಂಜು ಸಿನೆಮಾ ಲೋಕದಲ್ಲಿ ಹೊಸ ಟ್ರೆಂಡ್‌ ಸೃಷ್ಟಿಸಲಿದ್ದಾರೆ. ಕೆಲವೇ ದಿನದಲ್ಲಿ ಈ ಸಿನೆಮಾ ರಿಲೀಸ್‌ ಆಗಲಿದೆ. ಇದರ ಜತೆಗೆ, ಮಂಜು ಈಗ ‘ರತ್ನ ಮಂಜರಿ’ ಎಂಬ ಕನ್ನಡ ಸಿನೆಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಯುಎಸ್‌ಎ ಮೂಲದ ತಂಡವೊಂದು ಮಾಡುವ ಈ ಸಿನೆಮಾದಲ್ಲಿ ಮಂಜು ಸಬ್‌ ಇನ್ಸ್‌ಪೆಕ್ಟರ್‌ ರೋಲ್‌ ಮೂಲಕ ಗಮನ ಸೆಳೆಯಲಿದ್ದಾರೆ. ಚಿತ್ರದ ಶೂಟಿಂಗ್‌ ಸದ್ಯ ನಡೆಯುತ್ತಿದೆ. ಮಂಜು ಈಗಾಗಲೇ ತುಳುವಿನಲ್ಲಿ ರಿಕ್ಷಾ ಡ್ರೈವರ್‌, ಮದಿಮೆ, ಎಕ್ಕ ಸಕ್ಕ, ಐಸ್‌ಕ್ರೀಮ್‌, ದಂಡ್‌, ಜುಗಾರಿ, ಪ್ರೀತಿಗ್‌ ಪುದರ್‌ ದೀಲೆ, ಅಂಬರ ಕ್ಯಾಟರರ್, ಪಿಲಿಬೈಲ್‌ ಯಮುನಕ್ಕ, ಕೋರಿ ರೊಟ್ಟಿ, ಕರ್ಣೆ, ಮೈ ನೇಮ್‌ ಈಸ್‌ ಅಣ್ಣಪ್ಪೆ ಸಿನೆಮಾದಲ್ಲಿ ಅಭಿನಯಿಸಿದ್ದಾರೆ. ಇದಾದ ಬಳಿಕ ‘ಕಳ್ವೆ ನಂ.1’ ಎಂಬ ತುಳು ಸಿನೆಮಾದಲ್ಲೂ ಮಂಜು ಕಾಣಿಸಿಕೊಳ್ಳಲಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next