Advertisement

ಕಾಡಾನೆಗಳನ್ನು ಕಾಡಿಗಟ್ಟಿ ರಿಲ್ಯಾಕ್ಸ್ ಮೂಡ್ ಗೆ ಜಾರಿದ ಗೋಪಾಲಸ್ವಾಮಿ

11:40 AM Feb 13, 2022 | Team Udayavani |

ಹುಣಸೂರು : ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಿಂದ ಹೊರಬಂದಿದ್ದ ಕಾಡಾನೆಗಳನ್ನು ಮರಳಿ ಕಾಡಿಗೆ ಸೇರಿಸುವಲ್ಲಿ ಯಶಸ್ವಿಯಾದ ಕಂಠಾಪುರ ಸಾಕಾನೆ ಶಿಬಿರದ ಸಾಕಾನೆ ಗೋಪಾಲಸ್ವಾಮಿ ವೀರನಹೊಸಹಳ್ಳಿ ಅರಣ್ಯ ವಸತಿ ಗೃಹದ ಬಳಿಯ ಟ್ಯಾಂಕ್ ನಲ್ಲಿ ಸ್ನಾನ ಮಾಡಿ ರಿಲೀಫ್ ಆಗಿದ್ದಾನೆ.

Advertisement

ಮೂರು ದಿನಗಳ ಹಿಂದೆ 9 ಕಾಡಾನೆಗಳು ಅರಣ್ಯದಿಂದ ಹೊರಬಂದು ನಾಗಾಪುರ ಪುನರ್ವಸತಿ ಕೇಂದ್ರದ ಬಳಿಯಲ್ಲಿ ಬೀಡು ಬಿಟ್ಟಿದ್ದವು. ಈ ಪೈಕಿ ಐದು ಆನೆಗಳು ಮರಳಿ ಕಾಡು ಸೇರಿಕೊಂಡಿದ್ದವು. ಆದರೆ ಉಳಿದ ನಾಲ್ಕು ಆನೆಗಳು ವುಡ್ ಲಾಟ್ ಸೇರಿಕೊಂಡು ಕಾಡಿಗೆ ಹೋಗಲು ಸತಾರಾಂ ಒಪ್ಪದೆ ಹೊರಬಂದಿರಲಿಲ್ಲ.ಹೀಗಾಗಿ ಆನೆ ಚೌಕೂರು ವಲಯದ ಕಂಠಾಪುರ ಸಾಕಾನೆ ಶಿಬಿರದ ಗೋಪಾಲಸ್ವಾಮಿಯನ್ನು ಕರೆಸಲಾಗಿತ್ತು.

ಕಾಡಾನೆಗಳನ್ನು ಕಾಡಿಗಟ್ಟುವಲ್ಲಿ ಯಶಸ್ವಿಯಾದ ಗೋಪಾಲಸ್ವಾಮಿ ಕಾರ್ಯಾಚರಣೆ ನಂತರ ತಣ್ಣೀರಿನಲ್ಲಿ ಮಿಂದೆದ್ದು ರಿಲಾಕ್ಸ್ ಮೂಡ್ ಗೆ ಜಾರಿದ್ದಾನೆ.

Advertisement

Udayavani is now on Telegram. Click here to join our channel and stay updated with the latest news.

Next