Advertisement

TungaBhadra Dam: ಅಚ್ಚುಕಟ್ಟು ರೈತರ 2ನೇ ಬೆಳೆ ಕನಸು ಭಗ್ನ

12:42 AM Aug 12, 2024 | Team Udayavani |

ಗಂಗಾವತಿ: ಮುರಿದು ಬಿದ್ದಿರುವ ತುಂಗಭದ್ರಾ ಡ್ಯಾಂನ 19ನೇ ಕ್ರಸ್ಟ್‌ಗೇಟ್‌ ದುರಸ್ತಿಗೆ ಡ್ಯಾಂನಲ್ಲಿರುವ 105 ಟಿಎಂಸಿ ನೀರಿನ ಪೈಕಿ ಸುಮಾರು 60 ಟಿಎಂಸಿ ನೀರನ್ನು ನದಿಗೆ ಅನಿವಾರ್ಯವಾಗಿ ಬಿಡಬೇಕಿದ್ದು ಅಚ್ಚುಕಟ್ಟು ಪ್ರದೇಶದ ರೈತರ ಎರಡನೇ ಬೆಳೆಯ ಕನಸು ಭಗ್ನವಾಗಿದೆ.

Advertisement

4-5 ವರ್ಷಗಳಿಂದ ಒಂದಿಲ್ಲೊಂದು ಕಾರಣಕ್ಕಾಗಿ ಅಚ್ಚುಕಟ್ಟು ಪ್ರದೇಶದ ಕೊಪ್ಪಳ, ಬಳ್ಳಾರಿ, ವಿಜಯನಗರ, ರಾಯಚೂರು ಜಿಲ್ಲೆಗಳ ರೈತರು ಪೂರ್ಣಪ್ರಮಾಣದಲ್ಲಿ ಮುಂಗಾರು, ಬೇಸಗೆ ಬೆಳೆ ಪಡೆಯುವಲ್ಲಿ ವಿಫಲರಾಗಿದ್ದಾರೆ. ಸದ್ಯ ಕ್ರಸ್ಟ್‌ಗೇಟ್‌ ದುರಸ್ತಿ ಮಾಡಲು ಸಂಗ್ರಹವಾಗಿರುವ ನೀರಿನ ಪೈಕಿ 60 ಟಿಂಸಿ ನೀರು ನದಿಗೆ ಹರಿಸಬೇಕಿದೆ. ಈ ಬಾರಿ ಜುಲೈ ತಿಂಗಳಲ್ಲಿ ನೀರು ಕಾಲುವೆಗೆ ಹರಿಸಿದ್ದರಿಂದ ಅಚ್ಚುಕಟ್ಟು ಪ್ರದೇಶದಲ್ಲಿ ಶೇ. 80ರಷ್ಟು ಭೂಮಿಯಲ್ಲಿ ಭತ್ತದ ನಾಟಿ ಮಾಡಲಾಗಿದೆ. ಸಪ್ಟೆಂಬರ್‌-ಅಕ್ಟೋಬರ್‌ನಲ್ಲಿ ಜಲಾನಯನ ಪ್ರದೇಶದಲ್ಲಿ ಮಳೆಯಾಗದಿದ್ದರೆ ಮುಂಗಾರು ಹಂಗಾಮಿನ ಭತ್ತದ ಬೆಳೆ ರೈತರ ಕೈ ಸೇರುವುದು ಅನುಮಾನವಾಗಿದೆ.

7 ದಶಕಗಳ ಹಿಂದೆ ಮೈಸೂರು ರಾಜ್ಯ ಮತ್ತು ಹೈದರಾಬಾದ್‌ ನಿಜಾಮ ಸರಕಾರ ಯೋಜನೆ ರೂಪಿಸಿ ಅಂತಾರಾಜ್ಯ ಯೋಜನೆಯಡಿ ಈ ಡ್ಯಾಂ ನಿರ್ಮಿಸಲಾಗಿದೆ. ನೀರು ಹಂಚಿಕೆ, ಡ್ಯಾಂ ನಿರ್ವಹಣೆ ಜವಾಬ್ದಾರಿಯನ್ನು ಕೇಂದ್ರ ಸರಕಾರದ ನೇತೃತ್ವದಲ್ಲಿರುವ ಟಿಬಿ ಬೋರ್ಡ್‌ಗೆ ವಹಿಸಲಾಗಿದೆ. ಈ ಬೋರ್ಡ್‌ನಲ್ಲಿರುವ ಕಾರ್ಯದರ್ಶಿ ಸೇರಿ ಬಹುತೇಕ ಹುದ್ದೆಯಲ್ಲಿ ಆಂಧ್ರ ಮತ್ತು ತೆಲಂಗಾಣ ರಾಜ್ಯದ ನೀರಾವರಿ ಅಧಿಕಾರಿಗಳಿದ್ದಾರೆ. ಈ ಅಧಿಕಾರಿಗಳು ತಮ್ಮ ರಾಜ್ಯದ ನೀರಿನ ಪಾಲನ್ನು ಪಡೆಯುವಲ್ಲಿ ಮಾತ್ರ ಆಸಕ್ತಿ ತೋರುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next