Advertisement

178ರಲ್ಲಿ 132 ಕಾಮಗಾರಿ ಪೂರ್ಣ: ಶಾಸಕ

06:18 PM Jul 01, 2022 | Team Udayavani |

ತುಮಕೂರು: ರಾಷ್ಟ್ರ ಮಟ್ಟದಲ್ಲಿ ಆಯ್ಕೆಯಾಗಿರುವ 100 ಸ್ಮಾರ್ಟ್‌ಸಿಟಿ ಗಳಲ್ಲಿ ತುಮಕೂರು ಸ್ಮಾರ್ಟ್‌ಸಿಟಿ ಲಿಮಿಟೆಡ್‌ ದೇಶದಲ್ಲಿಯೇ 7ನೇ ಶ್ರೇಣಿಯಲ್ಲಿದ್ದು, ಕರ್ನಾಟಕದ 7 ಸ್ಮಾರ್ಟ್ ಸಿಟಿಗಳ ಪೈಕಿ ಪ್ರಥಮ ಸ್ಥಾನದಲ್ಲಿದೆ ಶಾಸಕ ಜಿ.ಬಿ.ಜ್ಯೋತಿಗಣೇಶ್‌ ತಿಳಿಸಿದರು.

Advertisement

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸ್ಮಾರ್ಟ್‌ಸಿಟಿ ಯೋಜನೆಗೆ ಸಂಬಂಧಿಸಿದಂತೆ ಕರೆಯಲಾದ ಸಮನ್ವಯ ಸಮಿತಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಒಟ್ಟು 178 ಕಾಮಗಾರಿ ಗಳ ಪೈಕಿ 132 ಕಾಮಗಾರಿಗಳನ್ನು ಸುಮಾರು 462 ಕೋಟಿ ವೆಚ್ಚದಲ್ಲಿ ಪೂರ್ಣಗೊಳಿಸಲಾಗಿದ್ದು, ಪ್ರಗತಿಯ ಹಂತದಲ್ಲಿರುವ 50 ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಸೂಕ್ತ ಕ್ರಮ ಜರುಗಿಸಿ: ಬೆಳಗುಂಬ ಮತ್ತು ಚಾಮುಂಡಿ ರಸ್ತೆಗಳಲ್ಲಿ ರಸ್ತೆ ಅಗಲೀಕರಣ ಕಾಮಗಾರಿಗೆ ಕಟ್ಟಡ ತೆರವುಗೊಳಿಸ ಬೇಕಾಗಿರುವುದರಿಂದ, ಮಹನಾಗರ ಪಾಲಿಕೆ ವತಿಯಿಂದ ರಸ್ತೆ ನಿರ್ಮಾಣಕ್ಕೆ ಅಗತ್ಯವಿರುವ ಅಡಚಣೆ ಗಳ ನಿವಾರಣೆ ಹಾಗೂ ಭೂ-ಸ್ವಾಧೀನದ ಬಗ್ಗೆ ಪಾಲಿಕೆ ವತಿಯಿಂದ ನಿರ್ಣಯ ತೆಗೆದುಕೊಂಡು ಸೂಕ್ತ ಕ್ರಮ ಜರುಗಿಸಲು ತುಮಕೂರು ಸ್ಮಾರ್ಟ್‌ಸಿಟಿ ಲಿಮಿಟೆಡ್‌ ಅವರಿಗೆ ತಿಳಿಸಲು ಸಭೆ ಯಲ್ಲಿ ಉಪಸ್ಥಿತರಿದ್ದ ಮಹಾನಗರ ಪಾಲಿಕೆ ಆಯುಕ್ತರಾದ ರೇಣುಕ ಅವರಿಗೆ ಸೂಚಿಸಿದರು.

ಭೂಮಿ ಹಸ್ತಾಂತರಕ್ಕೆ ಕ್ರಮ ಕೈಗೊಳ್ಳಿ: ಗಾರ್ಡನ್‌ ರಸ್ತೆ (ದಿಬ್ಬೂರು ಜಂಕ್ಷನ್‌ ನಿಂದ ಬಿ.ಎಚ್‌.ರಸ್ತೆ) ಹಾಗೂ ವರ್ತುಲ ರಸ್ತೆ ಅಭಿವೃದ್ಧಿ ಕಾಮಗಾರಿಯಡಿ ವರ್ತುಲ ರಸ್ತೆಯಲ್ಲಿರುವ ಕೆಸರುಮಡು ಜಂಕ್ಷನ್‌ನಲ್ಲಿ ಎರಡು ಜಾಗಗಳಲ್ಲಿ ಹಾಗೂ ಮಹೇಂದ್ರ ಶೋರೂಂ ಹತ್ತಿರದ ಒಂದು ಜಾಗದಲ್ಲಿ ಅಗತ್ಯವಿರುವ ಸ್ಥಳದ ಸಮಸ್ಯೆ ಬಗ್ಗೆ ಚರ್ಚಿಸಲಾಗಿ, ಭೂ- ಸ್ವಾಧೀನದ ಪರಿಹಾರ ಮೊತ್ತ ದೊರೆತಿಲ್ಲ ವಾದ್ದರಿಂದ ಸಮಸ್ಯೆಯಾಗಿದೆ. ಒಂದು ವಾರದೊಳಗಾಗಿ ಜಮೀನು ಮಾಲೀಕ ರಿಂದ ಭೂಮಿ ಹಸ್ತಾಂತರಿಸುವ ಸಂಬಂಧ ಸೂಕ್ತ ಕ್ರಮ ಜರುಗಿಸುವಂತೆ ಸಭೆಯಲ್ಲಿ ಉಪಸ್ಥಿತರಿದ್ದ ಉಪವಿಭಾ ಗಾಧಿಕಾರಿ ಅಜಯ್‌ ಅವರಿಗೆ ಸೂಚಿಸಲಾಯಿತು.

ತುಮಕೂರು ಸ್ಮಾರ್ಟ್‌ಸಿಟಿ ಲಿಮಿಟೆಡ್‌ ವತಿಯಿಂದ ಅನುಷ್ಠಾನಗೊಂಡಿರುವ ವೆಂಡಿಂಗ್‌ ಜೋನ್‌ಗಳು ಮುಕ್ತಾ ಯದ ಹಂತದಲ್ಲಿದ್ದು, ಮಹಾನಗರ ಪಾಲಿಕೆಗೆ ಹಸ್ತಾಂತರಿಸಿಕೊಂಡು ವ್ಯಾಪಾರಕ್ಕೆ ಅನುವು ಮಾಡಿಕೊಡುವಂತೆ ಮತ್ತು ಪೂರ್ಣಗೊಂಡಿರುವ ವೆಂಡಿಂಗ್‌ ಜೋನ್‌ಗಳನ್ನು ಸ್ಥಳೀಯ ಜನಪ್ರತಿ ನಿಧಿಗಳಿಂದ ಉದ್ಘಾಟಿಸಲು ಕ್ರಮ ಕೈಗೊಳ್ಳಲು ಪಾಲಿಕೆ ಆಯುಕ್ತರಿಗೆ ಸೂಚಿಸಲಾಯಿತು.

Advertisement

ನಿರ್ವಹಣೆಗೆ ಅವಕಾಶ: ಸ್ಮಾರ್ಟ್‌ಸಿಟಿ ಲಿಮಿಟೆಡ್‌ ವತಿಯಿಂದ ನಿರ್ಮಿಸಿರುವ ಉದ್ಯಾನವನಗಳನ್ನು ನಿರ್ವಹಣೆ ಮಾಡಲು ಸಂಘ-ಸಂಸ್ಥಗೆಳು, ವಿವಿಧ ಕಂಪನಿಗಳಿಂದ ಸಿಎಸ್‌ಆರ್‌ ಅನುದಾನ ದಲ್ಲಿ ನಿರ್ವಹಿಸಲು ಹಾಗೂ ಶಾಲಾ-ಕಾಲೇಜುಗಳೊಂದಿಗೆ ಮಾತನಾಡಿ, “ಸ್ಟೂಡೆಂಟ್‌ ಸೋಯಲ್‌ ರೆಸ್ಪಾನ್ಸಿಬಿಲಿಟಿ’ ಕಾರ್ಯಕ್ರಮದಡಿ ನಿರ್ವಹಣೆಗೆ ಅವಕಾಶ ಕಲ್ಪಿಸಕೊಡಲು ಸೂಕ್ತ ನಿರ್ಧಾರ ತೆಗೆದುಕೊಳ್ಳಲು ಶಾಸಕರು ಸೂಚಿಸಿದರು. ಸಭೆಯಲ್ಲಿ ಪಾಲಿಕೆ ಆಯುಕ್ತರಾದ ರೇಣುಕಾ, ಜಿಲ್ಲಾ ಶಸ್ತ್ರ ಚಿಕಿತ್ಸಕರಾದ ಡಾ.ವೀರಭದ್ರಯ್ಯ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿ ಗಳು ಉಪಸ್ಥಿತರಿದ್ದರು.

ಕಟ್ಟಡಗಳ ವಾಸ್ತವಿಕ ಸ್ಥಿತಿ ಅರಿವಿರಲಿ
ಪಿಪಿಪಿ ಮಾದರಿಯಡಿ ಸರ್ಕಾರಿ ಕಟ್ಟಡಗಳ ಮೇಲೆ ಅಳವಡಿಸುತ್ತಿರುವ ಸೋಲಾರ್‌ ರೂಫ್ಟಾಪ್‌ ಕಾಮಗಾರಿಯನ್ನು ಎಲ್ಲಾ ಸರ್ಕಾರಿ ಕಟ್ಟಡಗಳ ಮೇಲೆ ಅಳವಡಿಸುವುದು ಸೂಕ್ತವಲ್ಲ. ಕೆಲವೊಂದು ಕಟ್ಟಡಗಳು ಹಳೆಯದಾಗಿದೆ. ಸದರಿ ವ್ಯವಸ್ಥೆಯನ್ನು ಅಳವಡಿಸುವುದರಿಂದ ಕಟ್ಟಡದ ಚಾವಣಿಗಳು ಹಾಳಾಗಬಹು ದಾಗಿದ್ದು, ಕಟ್ಟಡಗಳ ವಾಸ್ತವಿಕ ಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಕಾಮಗಾರಿ ಕೈಗೊಳ್ಳುವಂತೆ ಮತ್ತು ಸೋಲಾರ್‌ ರೂಫ್ಟಾಪ್‌ ಅಳವಡಿಸಿರುವ ಕಟ್ಟಡಗಳಲ್ಲಿ ನೀರು ಹರಿದು ಹೋಗುವ ವ್ಯವಸ್ಥೆ ಕಲ್ಪಿಸುವಂತೆ ಸಭೆಯಲ್ಲಿ ಉಪಸ್ಥಿತರಿದ್ದಂತಹ ಸಂಸದ ಜಿ.ಎಸ್‌. ಬಸವಾರಾಜು ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.

ನಿರ್ಮಿಸಿರುವ ಕನ್ಸರ್ವೆನ್ಸಿ ಜಾಗವನ್ನು ಬಳಸಿಕೊಳ್ಳುವ ಸಂಬಂಧ ಪಾಲಿಕೆ ವತಿಯಿಂದ ಶುಲ್ಕವನ್ನು ನಿಗದಿಪಡಿಸಿ ಗುತ್ತಿಗೆ ನೀಡಲು ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಈಗಾಗಲೇ ನಿರ್ಣಯಿಸಲಾಗಿದ್ದು, ಅವಶ್ಯಕತೆ ಇರುವ ರಸ್ತೆಗಳಲ್ಲಿ ಕನ್ಸರ್ವೆನ್ಸಿ ಪಾರ್ಕಿಂಗ್‌ ಜಾಗಗಳನ್ನು ಬಳಸಿ ಕೊಳ್ಳಲು ದರ ನಿಗದಿಪಡಿಸಿ ಒಂದೇ ಪ್ಯಾಕೇಜಿನಂತೆ ಟೆಂಡರ್‌ ಕರೆಯಬೇಕು.

●ಜಿ.ಬಿ.ಜ್ಯೋತಿಗಣೇಶ್‌, ಶಾಸಕ

Advertisement

Udayavani is now on Telegram. Click here to join our channel and stay updated with the latest news.

Next